More

    ಕಲ್ಯಾಣ ಕಾರ್ಯಕ್ಕೆ ಬೊಮ್ಮಾಯಿ ಇಚ್ಛಾಶಕ್ತಿ ಪ್ರದರ್ಶಿಸಲಿ

    ವಿಜಯವಾಣಿ ಸುದ್ದಿಜಾಲ ಕಲಬುರಗಿ

    ಕಲ್ಯಾಣ ಕರ್ನಾಟಕ ಪ್ರದೇಶದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕಲ್ಯಾಣದ ಕಲ್ಯಾಣಕ್ಕೆ ದಿಟ್ಟತನದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಕಲ್ಯಾಣ ಕರ್ನಾಟಕದ ಹೋರಾಟ ಗಾರ ಲಕ್ಷ್ಮಣ ದಸ್ತಿಯವರು ಒತ್ತಾಯಿಸಿದರು.

    ಡಾ.ಬಿ.ಆರ್ ಅಂಬೇಡ್ಕರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕದಲ್ಲಿ ವಿಮೋಚನಾ ಚಳುವಳಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ್ನಾಡಿದ ಅವರು 371ನೇ ಜೇ ಕಲಂ ತಿದ್ದುಪಡಿ ಪಡೆದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನ 371j ಕಲಂ ತಿದ್ದುಪಡಿಯ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಸೇರಿದಂತೆ ನೆನಗುದಿಗೆ ಬಿದ್ದಿರುವ ಕಲ್ಯಾಣದ ಬೇಡಿಕೆಗಳು ಈಡೇಸಲು ದಿಟ್ಟತನದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಒತ್ತಾಯಿಸಿದರು.


    ಕಲ್ಯಾಣ ಕರ್ನಾಟಕದಲ್ಲಿ ವಿಮೋಚನಾ ಚಳುವಳಿಯ ಗಂಭೀರತೆಯ ಬಗ್ಗೆ ಮತ್ತು ಸರದಾರ ಪಟೇಲರ ದಿಟ್ಟತನದಿಂದ ಹೈದ್ರಾಬಾದ ನಿಜಾಮ ರಾಜ್ಯ ಅಖಂಡ ಭಾರತದಲ್ಲಿ ವಿಲೀನವಾದ ವಿಷಯದ ಕುರಿತು ವಿವರವಾಗಿ ವಿಷಯ ಮಂಡಿಸಿರುವ ಅವರು ಕಲ್ಯಾಣದ ಕಲ್ಯಾಣಕ್ಕೆ ಸರ್ಕಾರ ವಿಶೇಷವಾಗಿ ಪರಿಗಣಿಸಲು ಅಗ್ರಹಿಸಿದರು.

    ಶಾಂತಪ್ಪ ಸೂರನ್ ಮಾತನಾಡಿ, ಪ್ರಸ್ತುತ ಕಲ್ಯಾಣದ ಕಲ್ಯಾಣಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದರು.
    ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರ ಡಿ ರವರು ಸ್ವಾಗತ ಕೋರಿದರು. ಡಾ.ಗಾಂಧೀಜಿ ಮೋಳಕೇರೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts