ವಿಜಯಪುರ: ನಗರದ ರೈಲ್ವೆ ನಿಲ್ದಾಣದ ಹತ್ತಿರವಿರುವ ಶ್ರೀ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಪುರೋಹಿತ ಪರಿಷತ್ ಜಿಲ್ಲಾ ಘಟಕ ಉದ್ಘಾಟಿಸಲಾಯಿತು.
ಗುರುರಾಜ ಕಟ್ಟಿ ಉದ್ಘಾಟಿಸಿದರು. ಭೀಮಾಶಂಕರ ಸಂಸ್ಥಾನ ಮಠದ ಸದ್ಗುರು ದತ್ತಪ್ಪಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಹಂಗರಗಿ, ಶ್ರೀಹರಿ ಗೊಳಸಂಗಿ, ಆನಂದ ಜೋಶಿ, ಮಹೇಶ ದೇಶಪಾಂಡೆ, ಪ್ರಮೋದ್ ಅಥಣಿ, ಕೃಷ್ಣಭಟ್ ಗಲಗಲಿ, ಕಲ್ಯಾಣಿ ಸಂಗಮ್ ಮತ್ತಿತರರಿದ್ದರು.