More

    ಕಪ್ಪತಗುಡ್ಡದಲ್ಲಿ 11 ಬೇಟೆಗಾರರ ಬಂಧನ

    ಮುಂಡರಗಿ: ತಾಲೂಕಿನ ಡೋಣಿ ಗ್ರಾಮ ವ್ಯಾಪ್ತಿಯ ಕಪ್ಪತಗುಡ್ಡ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಯಾಡುತ್ತಿದ್ದವರನ್ನು ಆರ್​ಎಫ್​ಓ ಎಸ್.ಎಂ. ಶಿವರಾತ್ರೇಶ್ವರಸ್ವಾಮಿ ನೇತೃತ್ವದ ತಂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಘಟನೆ ಗುರುವಾರ ನಡೆದಿದೆ.

    ಡೋಣಿ ಗ್ರಾಮದ 11 ಜನರು ಕಪ್ಪತಗುಡ್ಡ ಅರಣ್ಯ ಪ್ರದೇಶದೊಳಗೆ ಮೊಲ, ಕಾಡುಹಂದಿ, ನರಿಗಳ ಬೇಟೆಯಾಡಲು ಹೋಗಿದ್ದರು. ಇದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು 11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇವರು ವಾರಕ್ಕೊಮ್ಮೆ ಕಪ್ಪತಗುಡ್ಡಕ್ಕೆ ಪ್ರಾಣಿ ಬೇಟೆಯಾಡಲು ತೆರಳುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

    ಆರೋಪಿತರಾದ ಹೊನ್ನಪ್ಪ ವಡ್ಡರ್, ರಾಜಪ್ಪ ಕೊರವರ, ರಾಮಪ್ಪ ಗುರಪ್ಪ ಕೊರವರ, ರಾಮಪ್ಪ ದುರಗಪ್ಪ ಕೊರವರ, ದುರಗಪ್ಪ ಕೊರವರ, ಮಲ್ಲಪ್ಪ ಕೊರವರ, ಸೋಮಂತ್ ಕೊರವರ, ಶಿವರಾಜ ತಳವಾರ, ಮಾರುತಿ ಕೊರವರ, ಮಲ್ಲೇಶ ಕೊರವರ ಹಾಗೂ ಹನಮಂತ ಕೊರವರ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 8 ಬೈಕ್, 11 ಬಲೆ ಹಾಗೂ ಬಲೆಗೆ ಹಾಕುವ 15 ಕೋಲುಗಳನ್ನು ವಶಪಡಿಸಿಕೊಂಡಿದ್ದಾರೆ.

    ಉಪವಲಯ ಅರಣ್ಯಾಧಿಕಾರಿ ಶಿವಪ್ರಸಾದ್ ಕುಬಸದ, ಅರಣ್ಯ ರಕ್ಷಕರಾದ ಅಮರಪ್ಪ ರಾಠೋಡ್, ಶಶಿಕುಮಾರ ಕೂಡಿಗೆ, ಪ್ರವೀಣ ಕೆಂಚೇರ್, ಗುರುಲಿಂಗಪ್ಪ ಇಟಗಿ, ಉಪ ವಲಯ ಅಧಿಕಾರಿ ಕಿರಣ್ ಬಿದರಹಳ್ಳಿ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts