ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರದ ಚುನಾವಣಾ ಸಂಬಂಧ ಶನಿವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಡಿ.ಸುಜಾತಾ ಅವರು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ, ಏ. 4ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಈ ಅವಧಿಯೊಳಗೆ ನಿತ್ಯ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಎಸ್ಯುಸಿಐ(ಸಿ) ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಪಕ್ಷದ ಮುಖಂಡರಾದ ರಾಧಾಕೃಷ್ಣ ಉಪಾಧ್ಯ, ಎಂ.ಎನ್.ಮಂಜುಳಾ, ರವಿಕುಮಾರ್, ಸದಸ್ಯರಾದ ಕುಮುದಾ, ನಿಂಗರಾಜು, ನಾಗರಾಜು, ಗಿರಿಜಮ್ಮ, ರತ್ನಮ್ಮ, ಬೋರಮ್ಮ, ಶಿವಲಿಂಗಪ್ಪ, ಲೋಕೇಶ್, ಪ್ರದೀಪ್, ರಾಜಕುಮಾರ್ ಆಚಾರ್, ಏಕಾಂತಪ್ಪ, ರೇಣುಕಮ್ಮ, ಲೀಲಾ ಇತರರಿದ್ದರು.