ರಾಣೆಬೆನ್ನೂರ: ಇಲ್ಲಿಯ ವಿಶ್ವ ಬಂಧು ನಗರದ ಉದ್ಯಾನದಲ್ಲಿ ಖಾಸಗಿಯವರು ಬೆಳೆದಿದ್ದ ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆಯನ್ನು ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ತೆರವುಗೊಳಿಸಿದರು.
ನಗರದ ಕೆಲ ಉದ್ಯಾನಗಳು ಖಾಸಗಿಯವರ ಪಾಲಾಗಿದ್ದರೆ, ಇನ್ನು ಕೆಲವು ಜನಬಳಕೆಯಿಂದ ದೂರ ಉಳಿಯುವಂತಾಗಿದೆ. ಈ ಕುರಿತು ವಿಜಯವಾಣಿ ಫೆ. 21ರಂದು ‘ಉದ್ಯಾನದಲ್ಲಿ ಉಳ್ಳಾಗಡ್ಡಿ, ಬೆಳ್ಳುಳ್ಳಿ’ ಕೃಷಿ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ಕುರಿತು ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ವಿಶ್ವ ಬಂಧು ನಗರದ ಉದ್ಯಾನದಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ, ಬೆಳ್ಳುಳ್ಳಿಯನ್ನು ತೆರವುಗೊಳಿಸಿದ್ದಾರೆ.
ಆದರೆ, ಕೆಲ ವಾರ್ಡ್ಗಳಲ್ಲಿ ಉದ್ಯಾನದಲ್ಲಿಯೇ ಕಟ್ಟಡ ನಿರ್ವಿುಸಿಕೊಂಡು ಕೆಲವರು ವಾಸಿಸುತ್ತಿದ್ದಾರೆ. ಇನ್ನು ಕೆಲವು ಸಂಪೂರ್ಣ ತ್ಯಾಜ್ಯ ತುಂಬಿಕೊಂಡು ಬಳಕೆಗೆ ಬಾರದ ಸ್ಥಿತಿಯಲ್ಲಿವೆ. ಕೂಡಲೆ ಅವುಗಳನ್ನು ಸರಿಪಡಿಸಬೇಕು. ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.