More

    ಇಚ್ಛಾಶಕ್ತಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ

    ನಿಪ್ಪಾಣಿ: ಇಚ್ಛಾಶಕ್ತಿ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬೆಳಗಾವಿಯ ಮಾರ್ಕೆಟಿಂಗ್ ತಜ್ಞ ಶ್ರೀಧರ ಕೊಕನೂರ ಹೇಳಿದರು.

    ನಗರದ ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಸಹಕಾರಿಯ ಎಲ್ಲ ಶಾಖೆಗಳ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಾಗಿ ಈಚೆಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳಿರುತ್ತವೆ. ಸಮಸ್ಯೆಗಳನ್ನು ಎದುರಿಸುವುದು ಚಾಣಾಕ್ಷತೆ ಇರಬೇಕು. ನಿನ್ನೆ, ನಾಳೆ ಬಿಟ್ಟು ಇಂದಿನ ದಿನವನ್ನು ಕುಟುಂಬ ಹಾಗೂ ಸ್ವಂತಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಬಿ. ಕುರಬೆಟ್ಟಿ, ಯೋಗೇಶ ದೇಶಮುಖ ಮಾತನಾಡಿದರು. ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ಚಂದ್ರಕಾಂತ ಕುರಬೆಟ್ಟಿ ಅವರನ್ನು ವಿವಿಧ ಶಾಖೆಗಳಿಂದ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸುರೇಶ ಶೆಟ್ಟಿ, ಸಂಚಾಲಕ ಪ್ರತಾಪ ಪಟ್ಟಣಶೆಟ್ಟಿ, ಶ್ರೀಕಾಂತ ಪರಮನೆ, ಮಹೇಶ ಬಾಗೇವಾಡಿ, ಸದಾನಂದ ಧುಮಾಲೆ, ಪ್ರತಾಪ ಮೇತ್ರಾನಿ, ಅಶೋಕ ಲಿಗಾಡೆ, ಪುಷ್ಪಾ ಕುರಬೆಟ್ಟಿ, ವಿಜಯಾ ಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಸದಾಶಿವ ಧನಗರ, ದಿನೇಶ ಪಾಟೀಲ, ಸಿಇಒ ಶಶಿಕಾಂತ ಆದನ್ನವರ, ಸಂಚಾಲಕ ಡಾ. ಶಂಕರಗೌಡ ಪಾಟೀಲ, ಸುಜಾತಾ ಜಾಧವ, ಸಹಾಯಕ ಸಿಇಒ ಸೂರಜ ಘೋಡಕೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts