More

    ಹೃದಯವಂತಿಕೆ ರಾಜಕಾರಿಣಿ ಪ್ರಸಾದ್: ಮಲ್ಲಿಕಾರ್ಜುನ ಖರ್ಗೆ

    ಮೈಸೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.


    ಲೋಕಸಭಾ ಚುನಾವಣೆ ಪ್ರಚಾರದ ನಡುವೆಯೂ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು, ಅಶೋಕಪುರಂ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಆಗಮಿಸಿದರು. ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಖರ್ಗೆ ಅವರು ಪ್ರಸಾದ್ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.


    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸಪ್ರಸಾದ್ ಅವರು ಮೈಸೂರು ಭಾಗದಲ್ಲಿ ಹುಲಿಯಂತೆ ಇದ್ದರು. ಹೃದಯವಂತಿಕೆ ರಾಜಕಾರಣಿ. ಸದಾ ಸಮಾಜಮುಖಿ ಹೋರಾಟಗಳಲ್ಲಿ ತೊಡಗಿದ್ದರು. ವಿಶೇಷವಾಗಿ ನೊಂದ ಜನರ ಹೋರಾಟದಲ್ಲಿ ಸಕ್ರಿಯವಾಗಿದ್ದರು. ನೇರ ನುಡಿಯ ರಾಜಕಾರಣದಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಬದುಕಿ ತೋರಿಸಿದರು.

    ರಾಜಕೀಯವಾಗಿ ಪರಸ್ಪರ ಗೌರವ ಕೊಡುತ್ತಿದ್ದ ವ್ಯಕ್ತಿ. ಎಂದೂ ನಂಬಿದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆಯಲಿಲ್ಲ. ಯಾರಿಗೂ ಜಗ್ಗದೆ ಸ್ವಾಭಿಮಾನದಿಂದ ಜೀವಿಸಿದವರು. ಅವರ ನಿಧನ ದೊಡ್ಡ ಆಘಾತ ಉಂಟು ಮಾಡಿದೆ ಎಂದರು.


    ಶ್ರೀನಿವಾಸಪ್ರಸಾದ್ ಅವರು ಸಮಾಜಕ್ಕಾಗಿ ಹೋರಾಟ ಮಾಡಿದ್ದಾರೆ. ಧೈರ್ಯದಿಂದ ಮುನ್ನುಗಿದ ಪ್ರಾಮಾಣಿಕ ರಾಜಕಾರಣಿ. ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟವರು. ಅನಾರೋಗ್ಯದಿಂದ ಅವರು ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ಆ ನೋವನ್ನು ತಡೆಯುವಂತಹ ಶಕ್ತಿ ನೀಡುವಂತೆ ಭಗವಂತನಲ್ಲಿ ಬೇಡಿಕೊಳ್ಳುವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts