ಹುಕ್ಕೇರಿ: ಜೈನರ ಪವಿತ್ರ ಸ್ಥಳವಾದ ಜಾರ್ಖಂಡದ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವೆಂದು ಅಲ್ಲಿನ ಸರ್ಕಾರ ಘೋಷಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹುಕ್ಕೇರಿ ತಾಲೂಕು ಜೈನ ಸಮುದಾಯದವರು ಮಂಗಳವಾರ ತಹಸೀಲ್ದಾರ್ ಎನ್.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಜೈನ ಅಸೋಸಿಯೇಷನ್ ಟಕ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜೈನ ಶ್ರಾವಕ, ಶ್ರಾವಕಿಯರು ಕೋರ್ಟ್ ವೃತ್ತದಲ್ಲಿ ಮಾನ ಸರಪಳಿ ನಿರ್ಮಿಸಿ ಜಾರ್ಖಂಡ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಹಿರಿಯ ವಕೀಲ ಪಿ.ಆರ್.ಚೌಗಲಾ, ಎಸ್.ಟಿ.ಮುನ್ನೋಳಿ, ಶ್ರೀಧರ ಖತಗಲ್ಲಿ, ಪಪ್ಪುಗೌಡ ಪಾಟೀಲ, ಪ್ರಿಯಾ ಖತಗಲ್ಲಿ, ಅವ್ವಕ್ಕ ಖೇಮಲಾಪುರೆ ಮಾತನಾಡಿ, ಜೈನ ಸಮುದಾಯದ 26 ಜೈನ ತೀರ್ಥಂಕರರಲ್ಲಿ 20 ತೀರ್ಥಂಕರರು ಮೋಕ್ಷ ಹೊಂದಿದ ಪವಿತ್ರ ಧಾರ್ಮಿಕ ೇತ್ರ. ಈ ಸ್ಥಳ ಜೈನರು ಪವಿತ್ರ ಹಾಗೂ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಅದನ್ನು ಪ್ರವಾಸಿ ತಾಣವಾಗಿ ಮಾಡಿದಲ್ಲಿ ಬರುವ ಪ್ರವಾಸಿಗರಿಂದ ಮೋಜು, ಮಸ್ತಿಯಿಂದ ಪ್ರಸಿದ್ಧ ಧಾರ್ಮಿಕ ೇತ್ರ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪುಂಡ&ಪೋಕರಿಗಳು ಮತ್ತು ಕುಡುಕರಿಂದ ಇಂತಹ ಪವಿತ್ರ ಸ್ಥಳಕ್ಕೆ ಧಕ್ಕೆಯಾಗುತ್ತದೆ. ಕಾರಣ, ತಕ್ಷಣ ಜಾರ್ಖಂಡ್ ಸರ್ಕಾರ ೂಷಿಸಿದ ಪ್ರವಾಸಿ ತಾಣದ ಆದೇಶ ರದ್ದುಗೊಳಿಸಬೇಕು. ಇಲ್ಲವಾದರೆ ದೇಶಾದ್ಯಂತ ಉಗ್ರ ಹೋರಾಟ ಅನಿವಾರ್ಯವೆಂದು ಎಚ್ಚರಿಸಿದರು. ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಸಂಜಯ ಅಡಕೆ, ಬಿ.ಬಿ.ಕಂಠಿ, ಡಾ.ಎಂ.ಎಸ್.ಮುನ್ನೋಳಿ, ಪ್ರಕಾಶ ಚೌಗಲಾ, ಸಿ.ಪಿ.ಪಾಟೀಲ, ಸಂಜಯ ನಿಲಜಗಿ, ಪಾರೇಶ ಮಲಾಜ, ಸಿ.ಡಿ.ಪಾಟೀಲ, ಸಂಜೀವ ಮಗದುಮ್ಮ, ವಿಫುಲ ಬಾಳಿಕಾಯಿ, ವಿದ್ಯಾಧರ ಹರಾರೆ, ಸುದರ್ಶನ ಜಾಬಣ್ಣವರ, ಅಶೋಕ ರಂಗೋಳಿ, ಮಹಾವೀರ ಬಾಗಿ, ಸುಜಾತಾ ಖಾನಾಪುರೆ ಇತರರಿದ್ದರು.