More

    ಅಸಂಘಟಿತ ಕಾರ್ವಿುಕರೇ ರಾಷ್ಟ್ರ ನಿರ್ಮಾಪಕರು

    ಗದಗ: ವೇತನ ಪ್ರಮಾಣ ಲೆಕ್ಕಿಸದೇ ಬೆವರು ಹರಿಸಿ ದುಡಿಯುವ ಅಸಂಘಟಿತ ವಲಯದ ಕಾರ್ವಿುಕರೇ ನಿಜವಾಗಿ ರಾಷ್ಟ್ರ ನಿರ್ಮಾಣ ಮಾಡುವ ದೇಶಭಕ್ತರು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಕಾರ್ವಿುಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ವಿುಕ ಸಮ್ಮಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಅಸಂಘಟಿತ ವಲಯದ ಕಾರ್ವಿುಕರ ಶ್ರಮವನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯದಿಂದ ದೇಶ ಕಟ್ಟುವ ಶ್ರಮ ಜೀವಿಗೆ ಅವರ ನಿಸ್ವಾರ್ಥ ಕಾರ್ಯಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

    ಕಾರ್ವಿುಕರು ಸರ್ಕಾರ ನೀಡುವ ಶಿಕ್ಷಣ, ಆರೋಗ್ಯ ಮುಂತಾದ ಸೌಲಭ್ಯಗಳನ್ನು ಪಡೆದು ತಮ್ಮ ಹಾಗೂ ಮಕ್ಕಳ ಭವಿಷ್ಯ ರೂಪಿಸಲು ಗಮನ ಹರಿಸಬೇಕು ಎಂದು ಹೇಳಿದರು.

    ಗದಗ ಜಿಲ್ಲೆ ಆಡಳಿತಾತ್ಮಕವಾಗಿ, ಅಭಿವೃದ್ಧಿ ಕಾರ್ಯದಲ್ಲಿ ಮುಂದಿದ್ದರೂ ಕಾರ್ವಿುಕರನ್ನು ಗುರುತಿಸುವ ಸೌಲಭ್ಯ ವಿತರಿಸುವ ಕಾರ್ಯದಲ್ಲಿ ಹಿಂದಿದೆ. ಕಾರ್ವಿುಕ ಇಲಾಖೆ ಅಧಿಕಾರಿಗಳು ಈ ಕುರಿತು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಅರ್ಹರಿರುವ ಎಲ್ಲ ಕಟ್ಟಡ ನಿರ್ಮಾಣ ಕಾರ್ವಿುಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ವಿುಕ ವಲಯ ಕಾರ್ವಿುಕರಾದ ರಚನವ್ವ ಗಡಿಯಪ್ಪ ದೊಡ್ಡಮನಿ, ರತ್ನವ್ವ ಮಾಳಗಿಮಣಿ, ಚನ್ನಬಸಪ್ಪ ತೆಗ್ಗಿನಮನಿ. ಆಶಾ ಗೌರಿಪೂರ, ಲೀಲಾವತಿ ಸಂಕನಗೌಡ್ರ. ಲಕ್ಷ್ಮಣ ಗೌಡಣ್ಣವರ, ಗೋಪಾಲ ಬಳ್ಳಾರಿ, ಶರಣಪ್ಪ ಮುಶಿಗೇರಿ, ಹನುಮಂತಗೌಡ ಹಳೇಮನಿ, ಅರಮನಿ ಸಂಗಪ್ಪ, ಲಿಂಗರಾಜ ಬಡಿಗೇರ, ಶೇಖರಪ್ಪ ಹಡಪದ, ಪಂಚಾಕ್ಷರಿ ಹಡಪದ, ಚನ್ನಬಸಪ್ಪ ಹಡಪದ, ಮೌನೇಶ್ವರ ಅಕ್ಕಸಾಲಿಗರ, ಶಂಕ್ರಪ್ಪ ಪತ್ತಾರ, ಪ್ರದೀಪ ನೆಹರು ಪೂತದೂರ, ವಿರೂಪಾಕ್ಷಯ್ಯ ಮಡಿವಾಳರ, ನಾಗರಾಜ ಬಡಿಗೇರ, ಸುರೇಶ ಕಮ್ಮಾರ, ಹುಸೇನಸಾಬ ಕಮ್ಮಾರ, ಮಂಜುನಾಥ ಕುಂಬಾರ, ನಾಗರಾಜ ಬಡಿಗೇರ, ಸುರೇಶ ಕುಂಬಾರ, ರೇಷ್ಮಾ ಸೋಮಾಪೂರ, ಸಾವಿತ್ರಿ ಶ್ಯಾವಿ, ದಿಲ್​ಶಾದಬೇಗ್ಂ ಮಣ್ಣೂರ, ಮೈಬೂಬಸಾಬ ಬೆಟಗೇರಿ, ಮೆಹಬೂಬಸಾಬ ಕಮ್ಮಾರ, ಫಕೀರಪ್ಪ ಮಾದರ, ಶಿವಾನಂದ ತಳವಾರ, ಮಹ್ಮದ್ ರಫೀಕ್ ನದಾಫ್, ಫಯಾಜ್ ಸಾಧಿಕ್, ಶಿವಾನಂದ ಮೆಣಸಗಿ, ಲಕ್ಷ್ಮಣ ಕಟ್ಟಿಮನಿ, ಫಕೀರಪ್ಪ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು.

    ತಾಪಂ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಜಿಪಂ ಸದಸ್ಯ ವಾಸಣ್ಣ ಕುರಡಗಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ನಿರ್ವಿುತಿ ಕೇಂದ್ರದ ಯೋಜನಾ ನಿರ್ದೇಶಕ ಶಿರೋಳ, ಬಾಲ ಕಾರ್ವಿುಕ ಶಾಖೆ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಮತ್ತಿತರರು ಭಾಗವಹಿಸಿದ್ದರು. ಎಸ್.ಎಸ್. ಗೌಡರ ನಿರೂಪಿಸಿದರು.

    ಕೊಡುಗೆ ಗುರುತಿಸಲು ಕ್ರಮ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರ ಅಸಂಘಟಿತ ವಲಯದ ಕೊಡುಗೆ ಗುರುತಿಸಲು ವಿನೂತನ ಕ್ರಮ ಕೈಗೊಂಡಿದೆ. ವಿವಿಧ ವರ್ಗಗಳ ಕಾರ್ವಿುಕರನ್ನು ಪಾರದರ್ಶಕ ಮೌಲ್ಯಾಂಕದ ಮೂಲಕ ಗುರುತಿಸಿ ಅವರಿಗೆ ಸ್ವರ್ಣ, ರಜತ ಹಾಗೂ ಕಂಚಿನ ಪದಕ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತಿದೆ ಎಂದರು.

    ವಿಶೇಷ ಪ್ರಶಸ್ತಿ ಪುರಸ್ಕಾರ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ವಿುಕ ಅಧಿಕಾರಿ ಸುಧಾ ಗರಗ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಅಸಂಘಟಿತ ಕಾರ್ವಿುಕ ಸಾಮಾಜಿಕ ಭದ್ರತಾ ಮಂಡಳಿಯಿಂದ ಜಿಲ್ಲೆಯಲ್ಲಿ ಅಸಂಘಟಿತ ವಲಯ 13 ವರ್ಗದ ಕಾರ್ವಿುಕರಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಗುತ್ತಿದೆ. ವಿಶೇಷ 8 ವಲಯದ ಅಸಂಘಟಿತ ಕಾರ್ವಿುಕರಿಗೆ ವಿಶೇಷ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts