ಧಾರವಾಡ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್ವುಸ್ ಹಬ್ಬವನ್ನು ನಗರದಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಹೊಸ ಬಟ್ಟೆ ಧರಿಸಿ ಕುಟುಂಬ ಸಮೇತರಾಗಿ ಚರ್ಚ್ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕ್ರೖೆಸ್ತರು, ವಿವಿಧ ಬಗೆಯ ಕೇಕ್ಗಳನ್ನು ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಮಕ್ಕಳಿಗೆ ಬಗೆಬಗೆಯ ತಿನಿಸು ಸೇರಿ ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದರು.
ಹಬ್ಬದ ಅಂಗವಾಗಿ ನಗರದಲ್ಲಿನ ಎಲ್ಲ ಚರ್ಚ್ಗಳೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಒಂದು ವಾರ ಮೊದಲೇ ನಗರದಲ್ಲಿ ಹಬ್ಬದ ವಾತಾವರಣ ನಿರ್ವಣವಾಗಿತ್ತು. ಗುರುವಾರ ಸಂಜೆಯಿಂದಲೇ ಬಹುತೇಕ ಚರ್ಚ್ಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಬಾಸೆಲ್ ಮಿಷನ್ ಹೆಬಿಕ್ ಮೆಮೋರಿಯಲ್ ಚರ್ಚ್, ಹಳಿಯಾಳ ರಸ್ತೆಯ ಆಲ್ಸೇಂಟ್ ಚರ್ಚ್, ಸೇಂಟ್ ಜೋಸೆಫ್ ಶಾಲೆ ಆವರಣದಲ್ಲಿನ ಹೋಲಿಕ್ರಾಸ್ ಚರ್ಚ್, ಕಲ್ಯಾಣನಗರದ ಕ್ಯಾಥೋಲಿಕ್ ಚರ್ಚ್ ಸೇರಿ ನಗರದ ಎಲ್ಲ ಚರ್ಚ್ಗಳಲ್ಲಿ ಕ್ರೖೆಸ್ತರು ಪ್ರಾರ್ಥನೆ ಸಲ್ಲಿಸಿದರು. ಹೆಬಿಕ್ ಮೆಮೋರಿಯಲ್ ಚರ್ಚ್ನಲ್ಲಿ ಬಿಷಪ್ ರೈ.ರೆ. ರವಿಕುಮಾರ ನಿರಂಜನ ಅವರು ಕ್ರಿಸ್ವುಸ್ ಸಂದೇಶ ನೀಡಿದರು.