More

    ಅವಳಿನಗರದಲ್ಲಿ ಸಂಭ್ರಮದ ಕ್ರಿಸ್​ವುಸ್

    ಧಾರವಾಡ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್​ವುಸ್ ಹಬ್ಬವನ್ನು ನಗರದಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಹೊಸ ಬಟ್ಟೆ ಧರಿಸಿ ಕುಟುಂಬ ಸಮೇತರಾಗಿ ಚರ್ಚ್​ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕ್ರೖೆಸ್ತರು, ವಿವಿಧ ಬಗೆಯ ಕೇಕ್​ಗಳನ್ನು ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಮಕ್ಕಳಿಗೆ ಬಗೆಬಗೆಯ ತಿನಿಸು ಸೇರಿ ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದರು.

    ಹಬ್ಬದ ಅಂಗವಾಗಿ ನಗರದಲ್ಲಿನ ಎಲ್ಲ ಚರ್ಚ್​ಗಳೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಒಂದು ವಾರ ಮೊದಲೇ ನಗರದಲ್ಲಿ ಹಬ್ಬದ ವಾತಾವರಣ ನಿರ್ವಣವಾಗಿತ್ತು. ಗುರುವಾರ ಸಂಜೆಯಿಂದಲೇ ಬಹುತೇಕ ಚರ್ಚ್​ಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ನಗರದ ಬಾಸೆಲ್ ಮಿಷನ್ ಹೆಬಿಕ್ ಮೆಮೋರಿಯಲ್ ಚರ್ಚ್, ಹಳಿಯಾಳ ರಸ್ತೆಯ ಆಲ್​ಸೇಂಟ್ ಚರ್ಚ್, ಸೇಂಟ್ ಜೋಸೆಫ್ ಶಾಲೆ ಆವರಣದಲ್ಲಿನ ಹೋಲಿಕ್ರಾಸ್ ಚರ್ಚ್, ಕಲ್ಯಾಣನಗರದ ಕ್ಯಾಥೋಲಿಕ್ ಚರ್ಚ್ ಸೇರಿ ನಗರದ ಎಲ್ಲ ಚರ್ಚ್​ಗಳಲ್ಲಿ ಕ್ರೖೆಸ್ತರು ಪ್ರಾರ್ಥನೆ ಸಲ್ಲಿಸಿದರು. ಹೆಬಿಕ್ ಮೆಮೋರಿಯಲ್ ಚರ್ಚ್​ನಲ್ಲಿ ಬಿಷಪ್ ರೈ.ರೆ. ರವಿಕುಮಾರ ನಿರಂಜನ ಅವರು ಕ್ರಿಸ್​ವುಸ್ ಸಂದೇಶ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts