More

    ಅತಿರುದ್ರ ಮಹಾಯಾಗ ಸಂಪನ್ನ

    ಯಲ್ಲಾಪುರ: ತಾಲೂಕಿನ ಇಡಗುಂದಿಯ ರಾಮಲಿಂಗ ದೇವಸ್ಥಾನದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಅತಿರುದ್ರ ಮಹಾಯಾಗ ಶನಿವಾರ ಸಂಪನ್ನಗೊಂಡಿತು. ಶನಿವಾರ ಬೆಳಗ್ಗೆ ವೇ.ಮಂಜುನಾಥ ಭಟ್ಟ ಭಟ್ರಕೇರಿ, ವೇ.ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಹಾಗೂ ಅಗ್ನಿಹೋತ್ರಿ ವೇ.ನರಸಿಂಹ ಭಟ್ಟ ನಡಗೋಡ ಅವರ ಆಚಾರ್ಯತ್ವದಲ್ಲಿ 11 ಕುಂಡಗಳಲ್ಲಿ ಅತಿರುದ್ರ ಮಹಾಯಾಗ ನೆರವೇರಿಸಲಾಯಿತು.

    ಪೂರ್ಣಾಹುತಿಯ ಸಂದರ್ಭದಲ್ಲಿ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯಾಗ ಮಂಟಪದಲ್ಲಿ ಶ್ರೀಗಳು ಗೋಪೂಜೆ ನೆರವೇರಿಸಿದರು. ಶ್ರೀಗಳ ಪಾದಪೂಜೆ ಹಾಗೂ ಬ್ರಾಹ್ಮಣ ಸುಹಾಸಿನಿಯರ ಪೂಜೆ ನೆರವೇರಿಸಲಾಯಿತು.

    ಐದು ದಿನಗಳ ಕಾಲ ಅತಿರುದ್ರ ಮಹಾಯಾಗ, ಅಥರ್ವಶೀರ್ಷ ಹವನ, ಚಂಡಿಕಾಯಾಗ ಸೇರಿ ಹಲವು ಧಾರ್ವಿುಕ ಕಾರ್ಯಕ್ರಮಗಳು 200 ಕ್ಕೂ ಹೆಚ್ಚು ವೈದಿಕರಿಂದ ನಡೆದವು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts