More

    ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ



    ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಎರಡು ನೂರರ ಅಂಚಿಗೆ ತಲುಪಿದೆ. ಪಟ್ಟಣದಲ್ಲಿಯೇ ಶತಕ ಬಾರಿಸಿದೆ. ಆದಾಗ್ಯೂ ಪಟ್ಟಣದ ಮಾರ್ಕೆಟ್​ನಲ್ಲಿ ಮುಂಜಾಗ್ರತೆ ಕ್ರಮಗಳಿಲ್ಲದೆ ಜನ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ. ಜನರ ಅನುಕೂಲಕ್ಕಾಗಿ ಲಾಕ್​ಡೌನ್ ಸಡಿಲಿಸಿದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕರೊನಾ ನಿಗ್ರಹಕ್ಕಾಗಿ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ಸರ್ಕಾರದ ಮನವಿ, ಸೂಚನೆಯನ್ನು ಜನ ಧಿಕ್ಕರಿಸುತ್ತಿದೆ ಎಂಬುದಕ್ಕೆ ಪಟ್ಟಣದ ಮಾರ್ಕೆಟ್ ಸಾಕ್ಷಿಯಾಗಿದೆ.

    ತಾಲೂಕಿನಲ್ಲಿ ಇದುವರೆಗೂ 186 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು ಲಕ್ಷ್ಮೇಶ್ವರ ಪಟ್ಟಣದಲ್ಲಿಯೇ 99 ಕೇಸ್​ಗಳು ದೃಢಪಟ್ಟಿವೆ. ಒಟ್ಟು 6 ಜನ ಸೋಂಕಿನಿಂದ ಮೃತಪಟ್ಟಿದ್ದು ಅದರಲ್ಲಿ ಐವರು ಪಟ್ಟಣದವರೇ ಆಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸರ್ಕಾರದ ಆದೇಶದಂತೆ ತರಕಾರಿ ಸಂತೆಯನ್ನು 2 ವಾರದಿಂದ ಹೊರವಲಯದ ಉಮಾ ವಿದ್ಯಾಲಯ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ವ್ಯಾಪಾರಸ್ಥರು ಮತ್ತು ಜನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ನಿಯಮದ ಮೇಲೆ ನಿಗಾವಹಿಸಲಾಗುವುದು. ಜನಸಂದಣಿ ತಡೆಗಟ್ಟಲು ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ಮತ್ತೊಮ್ಮೆ ಸಮಾಲೋಚಿಸಲಾಗುವುದು ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts