More

    ತಂಗಿ ಲವ್​​ ಮಾಡಿದ್ದಕ್ಕೆ ಆಕೆಯ ಜತೆ ತಾಯಿಯನ್ನು ಕೆರೆಗೆ ತಳ್ಳಿ ಕೊಂದ ಯುವಕ: ಮೈಸೂರಿನಲ್ಲಿ ದುರ್ಘಟನೆ

    ಮೈಸೂರು: ಯುವಕನೊಬ್ಬ ಹೆತ್ತ ತಾಯಿ ಮತ್ತು ತಂಗಿಯನ್ನೇ ಕೆರೆಗೆ ನೂಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ತಾಯಿ ಅನಿತಾ (43) ಮತ್ತು ಮಗಳು ಧನುಶ್ರೀ (19) ಎಂದು ಗುರುತಿಸಲಾಗಿದೆ. ಇಬ್ಬರನ್ನು ಕೆರೆಗೆ ತಳ್ಳಿ ಕೊಲೆಗೈದಿರುವ ಆರೋಪಿ ನಿತಿನ್​ನನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಹೋದರಿ ಧನುಶ್ರೀ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ, ನಿತಿನ್​ ಈ ಕೃತ್ಯ ಎಸಗಿದ್ದಾನೆ. ಧನುಶ್ರೀ, ಅನ್ಯ ಧರ್ಮದ ಯುವಕನನ್ನು ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಾಯಿ ಮತ್ತು ಧನುಶ್ರೀಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಕೆರೆ ಬಳಿಗೆ ಹೋದ ನಿತಿನ್​, ಧನುಶ್ರೀಯನ್ನು ಕೆರೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಹೋದ ತಾಯಿಯನ್ನು ಸಹ ಕೆರೆಗೆ ನೂಕಿದ್ದಾನೆ.

    ಇದೊಂದು ಮರ್ಯಾದೆ ಹತ್ಯೆಯಾಗಿದ್ದು, ಮರೂರು ಗ್ರಾಮದ ಜನತೆ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಕೆರೆಯಲ್ಲಿ ತೇಲುತ್ತಿದ್ದ ತಾಯಿ ಮತ್ತು ಮಗಳ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಿತಿನ್​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಗಣರಾಜ್ಯೋತ್ಸವ ಸಂಭ್ರಮಕ್ಕೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹೇಗಿದೆ ಸಿದ್ಧತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

    ಪಾಕ್​ ಪತಿ ಮುಂದೆ ಕೈ ಚಾಚುವಷ್ಟು ದುರ್ಗತಿ ಬಂದಿಲ್ಲ ಭಾರತದ ಸಾನಿಯಾಗೆ! ಮೂಗುತಿ ಸುಂದ್ರಿ ಒಟ್ಟು ಆಸ್ತಿ ಕೇಳಿದ್ರೆ ತಲೆ ತಿರುಗೋದು ಪಕ್ಕಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts