ಹಾವೇರಿ: ಹೊಸ ಮೊಬೈಲ್ಫೋನ್ ತರಲೆಂದು ಹೊರಟಿದ್ದ ಯುವಕನೊಬ್ಬ ರಸ್ತೆಯಲ್ಲೇ ಪ್ರಾಣಬಿಡುವಂತಾಗಿದೆ. ಮೃತದೇಹ ಸಂಪೂರ್ಣ ರಕ್ತಸಿಕ್ತವಾಗಿ ದಾರುಣವಾಗಿ ಸಾವು ಕಂಡಂತಾಗಿದೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದ ಬಳಿ ಈ ಅವಘಡ ಸಂಭವಿಸಿದೆ. ಇದರಲ್ಲಿ ಗುಡ್ಡಪ್ಪ ಗುಡಗೇರಿ (30) ಎಂಬಾತ ಸಾವಿಗೀಡಾಗಿದ್ದಾನೆ. ಈತ ಇಲ್ಲಿನ ಬೇಲೂರು ಗ್ರಾಮದ ನಿವಾಸಿ.
ಅವಿವಾಹಿತನಾಗಿದ್ದ ಈತ ಹೊಸ ಮೊಬೈಲ್ಫೋನ್ ತರಬೇಕು ಎಂದು ರಾಣೆಬೆನ್ನೂರಿಗೆ ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮೈಮೇಲೆ ಹರಿದುಹೋಗಿದೆ. ಪರಿಣಾಮವಾಗಿ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಶಸ್ತಿ ವಾಪ್ಸಿ ಬಳಿಕ ಇದೀಗ ಪಾಠ ವಾಪ್ಸಿ; ಪಠ್ಯ ಪರಿಷ್ಕರಣೆ ವಿವಾದಕ್ಕೆ ಇನ್ನೊಂದು ತಿರುವು…