ಸಚಿವರ ಮನೆಗೇ ಬೆಂಕಿ ಇಟ್ಟ ಜನರು; ಕಾರಣ ಆ ಒಂದು ಹೆಸರು…

ಹೈದರಾಬಾದ್​: ಪ್ರತಿಭಟನೆ ನಿರತರಾಗಿದ್ದ ಜನರ ಅಸಮಾಧಾನ ತೀವ್ರ ಆಕ್ರೋಶವಾಗಿ ಪರಿಣಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಅವರು ಸಚಿವರ ಮನೆಗೇ ಬೆಂಕಿ ಇಟ್ಟಿದ್ದಾರೆ. ಇಂಥದ್ದೊಂದು ಪ್ರಕರಣ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಸಾರಿಗೆ ಸಚಿವ ಪಿ. ವಿಶ್ವರೂಪ ಅವರ ಅಮಲಾಪುರಂ ಪಟ್ಟಣದಲ್ಲಿರುವ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಒಂದು ಪೊಲೀಸ್ ವಾಹನ ಮತ್ತು ಶಾಲಾ ವಾಹನವೊಂದಕ್ಕೂ ಬೆಂಕಿ ತಗುಲಿದೆ. ಈ ಸಂದರ್ಭದಲ್ಲಿನ ಕಲ್ಲುತೂರಾಟದಿಂದಾಗಿ 20ಕ್ಕೂ ಅಧಿಕ ಪೊಲೀಸರಿಗೂ ಗಾಯಗಳಾಗಿವೆ. ಆಂಧ್ರಪ್ರದೇಶದಲ್ಲಿ ಹೊಸದಾಗಿ ರಚಿಸಿರುವ ಜಿಲ್ಲೆಗೆ ಮಾಡಿದ್ದ ನಾಮಕರಣದಲ್ಲಿನ ವ್ಯತ್ಯಾಸವೇ … Continue reading ಸಚಿವರ ಮನೆಗೇ ಬೆಂಕಿ ಇಟ್ಟ ಜನರು; ಕಾರಣ ಆ ಒಂದು ಹೆಸರು…