More

    ಇನ್ನೆರಡು ವಾರದಲ್ಲಿ ಮದ್ವೆ ಆಗಬೇಕಿದ್ದವ, 2 ವರ್ಷದ ಮಗು ಸೇರಿ ಮೂವರು ಅಪಘಾತಕ್ಕೆ ಬಲಿ; ವಿವಾಹಕ್ಕೆಂದು ಬಟ್ಟೆ ತರಲು ಹೋಗಿದ್ದಾಗ ಆ್ಯಕ್ಸಿಡೆಂಟ್​

    ಮೈಸೂರು: ಇನ್ನೆರಡು ವಾರದಲ್ಲಿ ಮದುವೆ ಆಗಬೇಕಿದ್ದ ಯುವಕನೊಬ್ಬ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ. ವಿಪರ್ಯಾಸವೆಂದರೆ ವಿವಾಹಕ್ಕೆಂದು ಬಟ್ಟೆ ತರಲು ಹೋಗಿದ್ದಾಗಲೇ ಈ ಅಪಘಾತ ಸಂಭವಿಸಿದೆ.

    ಬಸ್-ಆಟೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಮ್ರಾನ್ ಪಾಷಾ (30), ಯಾಸ್ಮಿನ್ (28), ಅಫ್ನಾನ್ (2) ಸ್ಥಳದಲ್ಲೇ ಮೃತಪಟ್ಟವರು. ಮತ್ತೊಂದೆಡೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ, ಮತ್ತೊಬ್ಬರಿಗೆ ಕಾಲು ಮುರಿದುಹೋಗಿದೆ. ಗಾಯಾಳುಗಳನ್ನು ಕೆ.ಆರ್​. ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: ಮತಾಂತರವಾಗಿದ್ದವರ ಘರ್​ ವಾಪಸಿ; ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಶಿಲುಬೆ ತೆಗೆದಿಟ್ಟು ಕಂಕಣ ಕಟ್ಟಿಕೊಂಡು ವಾಪಸ್

    ಇಮ್ರಾನ್ ಪಾಷಾಗೆ ಮದುವೆ ನಿಶ್ಚಯವಾಗಿದ್ದು, ಅ.24ಕ್ಕೆ ವಿವಾಹ ಎಂದು ನಿಗದಿಯಾಗಿತ್ತು. ಮದುವೆ ಬಟ್ಟೆ ಖರೀದಿಗೆಂದು ಮೈಸೂರಿಗೆ ಹೋಗಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೈಸೂರು- ತಿ. ನರಸೀಪುರ ಹೆದ್ದಾರಿಯ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ತಿರುವಿನಲ್ಲಿ ಬಸ್​-ಆಟೋ ಮುಖಾಮುಖಿ ಡಿಕ್ಕಿಯಾಗಿದೆ. ಅಂದಹಾಗೆ ಅಪಘಾತಕ್ಕೀಡಾಗಿದ್ದು ಗೂಡ್ಸ್ ಆಟೋ.

    ರಾಜಧಾನಿಯಲ್ಲಿ ಮತ್ತೆ ನಾಲ್ವರು ನಾಪತ್ತೆ; ಒಂದೇ ಅಪಾರ್ಟ್​ಮೆಂಟ್​​ನ ಯುವತಿ, ಮೂವರು ಮಕ್ಕಳು ಕಾಣೆ..!

    ಓದೋಕೆ ಆಸಕ್ತಿ ಇಲ್ಲ, ಆಡೋಕೆ ಇಷ್ಟ, ಅದ್ರಲ್ಲೇ ದುಡಿತೀವಿ ಅಂತ ಮನೆ ಬಿಟ್ಟು ಹೋದ್ರು ಮೂವರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts