ಬೆಂಗಳೂರು: ಒಂದೇ ಶಾಲೆಯ ಒಂದೇ ತರಗತಿಯ ಮೂವರು ವಿದ್ಯಾರ್ಥಿಗಳ ನಾಪತ್ತೆ ಬೆನ್ನಿಗೆ ಮತ್ತೆ ನಾಲ್ವರು ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ. ಇಲ್ಲಿ ಒಂದೇ ಅಪಾರ್ಟ್ಮೆಂಟ್ನ ಯುವತಿ ಮಾತ್ರವಲ್ಲದೆ ಮೂವರು ಮಕ್ಕಳು ಕಾಣೆಯಾಗಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ಎಜಿಬಿ ಲೇಔಟ್ನಲ್ಲಿರುವ ಕ್ರಿಸ್ಟಲ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಓರ್ವ ಯುವತಿ ಅಮೃತವರ್ಷಿಣಿ (21) ಹಾಗೂ ರಾಯನ್ ಸಿದ್ಧಾಂತ (12), ಭೂಮಿ (12) ಮತ್ತು ಚಿಂತನ್ (12) ಕಾಣೆಯಾದವರು.
ಇದನ್ನೂ ಓದಿ: ಮತಾಂತರವಾಗಿದ್ದವರ ಘರ್ ವಾಪಸಿ; ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಶಿಲುಬೆ ತೆಗೆದಿಟ್ಟು ಕಂಕಣ ಕಟ್ಟಿಕೊಂಡು ವಾಪಸ್
ನಾಲ್ವರೂ ಒಂದೇ ರೀತಿಯ ಪತ್ರ ಬರೆದಿಟ್ಟು ನಾಪತ್ತೆ ಆಗಿದ್ದಾರೆ. ಈ ಮಕ್ಕಳು ಇಂದು ಬೆಳಗಿನಿಂದ ಕಾಣಿಸದಿರುವುದರಿಂದ ಪಾಲಕರು ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಕ್ಕಳು ಸ್ಪೋರ್ಟ್ಸ್ ಐಟಂ ಜತೆಗೆ ಸ್ಲಿಪ್ಪರ್, ಬ್ರಶ್, ಟೂತ್ಪೇಸ್ಟ್, ವಾಟರ್ ಬಾಟಲ್, ಕ್ಯಾಶ್ ಹಿಡಿದುಕೊಂಡು ಬರಬೇಕು ಎಂದು ಪರಸ್ಪರ ಸಂವಹನ ಮಾಡಿಕೊಂಡಿರುವುದು ಪತ್ರದಲ್ಲಿ ಉಲ್ಲೇಖವಾಗಿದೆ.
ಓದೋಕೆ ಆಸಕ್ತಿ ಇಲ್ಲ, ಆಡೋಕೆ ಇಷ್ಟ, ಅದ್ರಲ್ಲೇ ದುಡಿತೀವಿ ಅಂತ ಮನೆ ಬಿಟ್ಟು ಹೋದ್ರು ಮೂವರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು!