ಧಾರವಾಡ: ಗ್ರಾಮೀಣ-71 ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪ ಬಳಿ ನಮನ ಸಲ್ಲಿಸಲಾಯಿತು.
ಗ್ರಾಮಿಣ ಘಟಕ ಅಧ್ಯಕ್ಷ ಮೈಲಾರ ಪಾಟೀಲ, ಶಹರ ಘಟಕದ ಅಧ್ಯಕ್ಷ ವಿನಯ್ ಬಾಬರ್, ಚೇತನ ವಿಜಾಪುರ, ಸುರೇಶ ದೊಡ್ಡಮನಿ, ಈಶ್ವರ ಹಂಚಿನಾಳ, ಅಕ್ಷಯ ರಾಮಜಿ, ಫಕೀರ ಸಬರದ್, ರಾಜು ಧಾರವಾಡ, ಇದ್ದರು.