ಬೆಂಗಳೂರು:
ನಾಗರಹಾವಿಗೆ ತಲೆನೋವು ಬಂದಾಗ ತಲೆ ಚಚ್ಚಿಕೊಂಡು ಸಾಯುತ್ತದೆ. ಈಗ (ಯತ್ನಾಳ್) ಅವರು ತಲೆ ನೋವು ಬಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ನಡಹಳ್ಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾಗರ ಹಾವಿಗೆ ಔಷಧಿ ಕೂಡ ಇದೆ. ಸೂಕ್ತ ಸಂದರ್ಭದಲ್ಲಿ ಔಷಧಿ ಕೊಡುತ್ತೇವೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.