More

    ಯದುವೀರ್ ಚಿಹ್ನೆ ಹಸ್ತ…!

    ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗುರುತು ‘ಹಸ್ತ’ಕ್ಕೆ ಮತ ಚಲಾಯಿಸಬೇಕು ಎಂದು ಬಿಜೆಪಿ ಮುಖಂಡ ಮೈ.ವಿ. ರವಿಶಂಕರ್ ಭಾನುವಾರ ಬಾಯಿತಪ್ಪಿ ಕ್ಯಾತಮಾರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮತದಾರರ ಬಳಿ ಮನವಿ ಮಾಡಿದರು.

    ಈ ಸಂದರ್ಭ ಮೈ.ವಿ. ರವಿಶಂಕರ್ ಅವರನ್ನು ಎಚ್ಚರಿಸುವ ಕಾರ್ಯವನ್ನು ಬಿಜೆಪಿ ಮುಖಂಡರು ಮಾಡಿದಾಗ ತಾನು ಆಡಿದ ಮಾತಿನ ತಪ್ಪು ರವಿಶಂಕರ್ ಅವರಿಗೆ ಅರಿವಾಯಿತು. ‘ನನ್ನ ಬಾಯಲ್ಲಿ ಈ ರೀತಿ ಯಾಕೆ ಬಂತು ಗೊತ್ತಾಗಲಿಲ್ಲ, ಕ್ಷಮಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ ರವಿಶಂಕರ್, ಯದುವೀರ್ ಅವರ ಚಿಹ್ನೆ ‘ಕಮಲ’ಕ್ಕೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts