More

    ರುದ್ರಮುನಿ ಶ್ರೀ ಇನ್ನಿಲ್ಲ

    ಬೀದರ್: ಚಾಂಬೋಳದ ಶ್ರೀ ರುದ್ರಮುನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ರುದ್ರಮುನಿ ಪಟ್ಟದ್ದೇವರು (86) ಗುರುವಾರ ಲಿಂಗೈಕ್ಯ ಹೊಂದಿದರು.
    ಕೆಲ ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಂಜೆ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನದಂತೆ ಅಂತ್ಯಕ್ರಿಯೆ ಜರುಗಿತು. 63 ವರ್ಷ ಮಠವನ್ನು ಪಟ್ಟದ್ದೇವರು ಮುನ್ನಡೆಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದ ಪೂಜ್ಯರು, ಗ್ರಾಮದಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್ ಸ್ಥಾಪಿಸಿದ್ದರು. 1ರಿಂದ 10ನೇ ತರಗತಿವರೆಗೆ ಶಾಲೆ ಶುರು ಮಾಡಿದ್ದರು.
    ಅಂತ್ಯಕ್ರಿಯೆಯಲ್ಲಿ ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಭಾತಂಬ್ರಾದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ, ಹಲಬರ್ಗಾದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ, ಹಿರನೆಗಾಂವನ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯ, ಶ್ರೀ ಶಂಕರಲಿಂಗ ಶಿವಾಚಾರ್ಯ ಸೊಂತ, ಯದಲಾಪುರದ ಶ್ರೀ ಶಂಕರಲಿಂಗ ಶಿವಾಚಾರ್ಯ, ಹೆಡಗಾಪುರದ ಶ್ರೀ ಶಿವಲಿಂಗ ಶಿವಾಚಾರ್ಯ, ಶ್ರೀ ಗುರುಪಾದಲಿಂಗ ಶಿವಾಚಾರ್ಯ ಪಾಲ್ಗೊಂಡಿದ್ದರು.
    ಮೂಲತಃ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದವರು. 1938ರಲ್ಲಿ ಜನಿಸಿದ್ದ ಪೂಜ್ಯರು ಶಿವಯೋಗ ಮಂದಿರದಲ್ಲಿ ವ್ಯಾಸಂಗ ಮಾಡಿ 1961ರಲ್ಲಿ ಚಾಂಬೋಳ ಮಠಕ್ಕೆ ಉತ್ತರಾಕಾರಿಯಾಗಿ ನೇಮಕಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts