More

    ರಂಗಭೂಮಿಗೆ ಸರ್ಕಾರ ಹೆಚ್ಚು ಅವಕಾಶ ಕೊಡಲಿ: ಹಿರಿಯ ರಂಗಕರ್ಮಿ ಪ್ರಕಾಶ್ ಸಲಹೆ

    ಮಂಡ್ಯ: ರಂಗಭೂಮಿಯು 1962ರಲ್ಲಿ ಪ್ರಾರಂಭವಾಯಿತೆಂದು ಹೇಳಲಾಗುತ್ತಿದೆ. ಆದರೆ ಇದು ಇನ್ನೂ ಸಹ ಆರಂಭದ ಹಂತದಲ್ಲಿಯೇ ಇರುವುದು ವಿಪರ್ಯಾಸ ಎಂದರು ಹಿರಿಯ ರಂಗಕರ್ಮಿ ಪ್ರಕಾಶ್ ವಿಷಾದಿಸಿದರು.
    ನಗರದ ಹೊಸಹಳ್ಳಿ ಬಡಾವಣೆಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ರಾಜ್ಯಮಟ್ಟದ ರಂಗಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಲೂರು ವೆಂಕಟರಾಯರು, ಹುಯಿಲಗೊಳ ನಾರಾಯಣರಾಯರು ಬೀದಿ ನಾಟಕದ ಮೂಲಕ ಏಕೀಕರಣಕ್ಕೆ ಬೀದಿ ನಾಟಕದ ಮೂಲಕ ಏಕೀಕರಣದಲ್ಲಿ ಕರ್ನಾಟಕ ರಾಜ್ಯ ತರುವಲ್ಲಿಯೂ ಇವರ ಪಾತ್ರವಿದೆ, ಆಳುವ ಸರ್ಕಾರಗಳು ರಂಗಭೂಮಿಗೆ ಅವಕಾಶಗಳನ್ನು ಹೆಚ್ಚು ನೀಡಬೇಕು. ಆದರೆ ರಂಗಭೂಮಿಯನ್ನು ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ. ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಕ್ರಿಕೆಟ್, ಹಾಕಿ, ಬಾಡ್ಮಿಂಟನ್, ಕಬಡ್ಡಿ, ುಟ್ಬಾಲ್ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಆದರೆ ರಂಗಭೂಮಿಯನ್ನು ರಾಜ್ಯಮಟ್ಟಕ್ಕೆ ಹೋಗಿಲ್ಲ. ರಾಜ್ಯ ಸರ್ಕಾರವು ತೆಗೆದುಕೊಂಡು ಹೋಗುವುದರಲ್ಲಿ ಹಿಂದೆ ಇದೆ. ಶಾಲಾ ಹಂತದಲ್ಲಿ ಮಹಾಭಾರತ, ರಾಮಯಾಣದ ಬಗ್ಗೆ ಗದ್ಯ ಮತ್ತು ಪದ್ಯದ ಭಾಗಗಳನ್ನು ತರುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರ ಬಿತ್ತುವ ಕೆಲಸ ಆಗಬೇಕು. ಪಿಟೀಲು ಚೌಡಯ್ಯ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಪಿಟೀಲು ನುಡಿಸುವ ಅಥವಾ ಅಭ್ಯಾಸ ಮಾಡುವ ಸಂರ್ಭದಲ್ಲಿ ಅಲ್ಲಿನ ಹೂವಿನ ಗಿಡಗಳು ಬಾಗಿ ಸಂಗೀತವನ್ನು ಆಲಿಸುತ್ತಿದ್ದವು. ಅಂದರೆ ಸಸ್ಯಗಳಿಗೂ ಕೂಡ ಸಂಗೀತ ಜ್ಞಾನವಿದೆ. ಸುಮಾರು 860 ವರ್ಷಗಳ ಹಿಂದೆಯೇ ಪ್ರಕೃತಿಗೂ ಸಂಗೀತ ಜ್ಞಾನವಿದೆ ಎಂಬುದನ್ನು ಸಹ ನಾವು ಕೇಳಿದ್ದೇವೆ. ಅಶ್ವಘೋಷ ಎಂಬ ಮಹಾಕವಿ ವೇಣಿ ಸಂಹಾರ ಎಂಬ ಅಸ್ಸಾಂ ನಾಟಕವನ್ನು ಪರಿಚಯಿಸಿದ್ದರು. ಭಾರತದಲ್ಲಿ ಬಯಲಾಟ, ಜಾನಪದ ಕಲೆ, ರಂಗಭೂಮಿ ಶುರುವಾಯಿತು, ಇದರಲ್ಲಿ ದೃಶ್ಯ ಮಾಧ್ಯಮ, ಪದಪುಂಜಗಳು ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲಾಯತು ಎಂದು ವಿವರಿಸಿದರು.
    ಪ್ರೌಢಶಾಲೆವರೆಗೆ ರಂಗಭೂಮಿ, ಮಹಾಭಾರತ, ರಾಮಾಯಣದ ಬಗ್ಗೆ ಗದ್ಯ ಮತ್ತು ಪದ್ಯದ ಭಾಗಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರವನ್ನು ಬಿತ್ತುವ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಪೌರಾಣಿಕ ನಾಟಕ ಪ್ರದರ್ಶನಕ್ಕೆ 1 ಲಕ್ಷ ರೂವರೆಗೂ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.
    ಪತ್ರಕರ್ತ ಮತ್ತೀಕೆರೆ ಜಯರಾಂ ಮಾತನಾಡಿ, ರಂಗಭೂಮಿ ಕ್ಷೇತ್ರವನ್ನು ಉಳಿಸಲು ಹಲವು ಹಿರಿಯ ಕಲಾವಿದರು ಮುಂದಿದ್ದಾರೆ. ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ ಸಿಗಬೇಕು. ಕಲಾವಿದರು ಎರಡು ಮೂರು ತಿಂಗಳು ತಪಸ್ಸಿನಂತೆ ಕಲಿಯುವ ಮೂಲಕ ನಂತರ ಪ್ರದರ್ಶಿಸುವುದೇ ಒಂದು ರಚನಾತ್ಮಕತೆ ಇದೆ. ಅಂತಹ ಕಲೆಗಳು ಉಳಿದು ಬೆಳಗುವ ಕೆಲಸವು ಆಗಬೇಕು, ಅದೇ ರೀತಿ ಕಲಾವಿದರಿಗೂ ನೆರವು ಸಿಗುವಂತಾಗಬೇಕು ಎಂದು ತಿಳಿಸಿದರು.
    ಕಾರ್ಯಕ್ರಮವನ್ನು ಗರ್ಭಿಣಿ ಮತ್ತು ಸೀರೋಗ ತಜ್ಞೆ ಡಾ.ಕಾವ್ಯಶ್ರೀ ರಮೇಶ್, ಮಕ್ಕಳ ತಜ್ಞ ಡಾ.ರಮೇಶ್ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕರಾದ ಕೃಷ್ಣರಾಜು, ಗುರುಮೂರ್ತಾಚಾರ್, ಕಲ್ಕೆರೆ ನರಸಿಂಹಮೂರ್ತಿ, ಪುಟ್ಟಣ್ಣ, ಕಲಾವಿದರಾದ ಎಚ್.ಕೆ.ಶಂಕರೇಗೌಡ, ಡಿ.ನಾಗೇಶ್, ದೊಡ್ಡಯ್ಯ, ಬಸವಲಿಂಗಚಾರ್, ಕೆ.ರಾಮಲಿಂಗೇಗೌಡ, ಬಿ.ಚಿಕ್ಕಸಿದ್ದಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts