More

    ನದಿಗೆ ಹಾರಿ ಮಹಿಳೆ ಆತ್ಮಹತ್ಯೆ: ಮೂರು ದಿನವಾದರೂ ಸಿಗದ ಮೃತದೇಹ

    ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಬಳಿ ಗಣೇಶ ಹಬ್ಬದಂದು ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದೆ.
    ಹೊಸಮಾವಿನಕೆರೆ ಗ್ರಾಮದ ಬಲ್ಲರಾಮಯ್ಯ ಅವರ ಪತ್ನಿ ಜಯಮ್ಮ(60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜಯಮ್ಮ ಅವರ ಮಗಳನ್ನು ಪಾಂಡವಪುರಕ್ಕೆ ವಿವಾಹ ಮಾಡಿಕೊಡಲಾಗಿದ್ದು ಮಗಳಿಗೆ ಬಾಗಿನ ಕೊಡಲು ಮಂಗಳವಾರ ಪಾಂಡವಪುರಕ್ಕೆ ಜಯಮ್ಮ ತೆರಳಿದ್ದರು. ಮಗಳ ಮನೆಗೆ ಹೋಗುವ ಮಾರ್ಗಮಧ್ಯೆ ತನ್ನ ಕತ್ತಿನಲ್ಲಿದ್ದ ಚಿನ್ನದ ಸರ ಕಳವಾಗಿದ್ದನ್ನು ಗಮನಿಸಿ ಮನೆಯವರಿಗೆ ಏನು ಹೇಳಲಿ ಎಂಬ ಭಯದಿಂದ ಮಗಳ ಮನೆಗೆ ಹೋಗಿ ಬಾಗಿನ ನೀಡದೆ ಹಿಂದಿರುಗಿ ಗ್ರಾಮದ ಸಮೀಪದ ಹೊಳೆಯ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಮ್ಮನ ಬ್ಯಾಗಿನಲ್ಲಿ ಬಾಗಿನದ ಸಾಮಗ್ರಿಗಳು ಪತ್ತೆಯಾಗಿದ್ದು ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಈಜುಗಾರರು ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
    ಅಗ್ನಿಶಾಮಕ ಸಿಬ್ಬಂದಿಗೆ ಅಗತ್ಯ ಪರಿಕರಗಳಿಲ್ಲದೆ ಪರದಾಡಿದರು. ಸಚಿವರ ಕ್ಷೇತ್ರವಾಗಿದ್ದರೂ ಇಲ್ಲಿನ ಸಿಬ್ಬಂದಿಗೆ ನೀರಿನಲ್ಲಿ ಕಾರ್ಯಾ ಚರಣೆ ನಡೆಸಲು ಬೋಟಿಲ್ಲದೆ. ಮೀನುಗಾರರ ತೆಪ್ಪವನ್ನು ಅವಲಂಭಿಸಿ ಕಾರ್ಯಾಚರಣೆ ನಡೆಸಿದರು. ಹಲವು ವರ್ಷಗಳಿಂದ ರಕ್ಷಣಾ ಕಾರ್ಯಾಚರಣೆಗೆ ಮೂಲ ಸೌಕರ್ಯಕ್ಕೆ ಮನವಿ ಕೊಟ್ಟರೂ ಸರ್ಕಾರ ಸೌಲಭ್ಯ ಕಲ್ಪಿಸಿಲ್ಲ. ಕಾರ್ಯಾಚರಣೆಗೆ ಪರಿಣಿತ ಈಜುಗಾರರ ಕೊರತೆ ಇದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನಿರಂಜನ್, ಪಿಎಸ್‌ಐ ಪ್ರಮೋದ್ ಭೇಟಿ ನೀಡಿ ಶವದ ಹುಡುಕಾಟ ಮುಂದುವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts