More

    ಆಕೆಗೆ ಮೂವರು ಗಂಡಂದಿರು… ಕೊಂದವರು ಯಾರು?

    ಚೆನ್ನೈ: ಬುಧವಾರ ರಾತ್ರಿ 8:30 ರ ಸುಮಾರಿಗೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಎಲ್ಲರೂ ನೋಡುತ್ತಿರುವಾಗಲೇ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲ್ಲಲಾಯಿತು. ಚೆನ್ನೈನ ಸೈತಾಪೆಟ್ಟೈ ರೈಲು ನಿಲ್ದಾಣದಲ್ಲಿ ಈ ಭಯಾನಕ ಘಟನೆ ನಡೆದಿದೆ. ಹೌದು… ರೈಲ್ವೆ ನಿಲ್ದಾಣದಲ್ಲಿಯೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಚೆನ್ನೈನ ಮೀನಂಬಾಕ್ಕಂ ಎಂಜಿಆರ್ ನಗರ ಪ್ರದೇಶದ ರಾಜಿ ಅಲಿಯಾಸ್ ರಾಜೇಶ್ವರಿ (34) ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳು ನಂತರ ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ.

    ಘಟನೆಯ ವಿವರ
    ರಾಜೇಶ್ವರಿ ಎಂಬ ಮಹಿಳೆ ರೈಲಿನಲ್ಲಿ ಸಮೋಸ ಮತ್ತು ಹಣ್ಣುಗಳನ್ನು ಮಾರುತ್ತಾಳೆ. ಬುಧವಾರ ರಾತ್ರಿಯೂ ರಾಜೇಶ್ವರಿ ಎಗ್ಮೂರಿನಿಂದ ಗಿಂಡಿಗೆ ಹೋಗುವ ರೈಲಿನಲ್ಲಿ ಹಣ್ಣು, ಸಮೋಸ ಮಾರುತ್ತಿದ್ದರು. ಬಳಿಕ ಅದರ ಪಕ್ಕದಲ್ಲಿ ಎಲೆಕ್ಟ್ರಿಲ್ ರೈಲು ಬಂದು ನಿಂತಿತು. ಈ ವೇಳೆ ರಾಜೇಶ್ವರಿ ಪ್ಲಾಟ್​​ಫಾರ್ಮ್​​​ ಮೇಲೆ ಬಂದರು. ನಾಲ್ವರು ದುಷ್ಕರ್ಮಿಗಳು ನಿಲ್ಲಿಸಿದ್ದ ಎಲೆಕ್ಟ್ರಿಕ್ ರೈಲಿನಿಂದ ಜಿಗಿದು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವುದು ಗೊತ್ತಾಗಿದೆ. ಚಾಕು ಮತ್ತು ಮಾರಕಾಸ್ತ್ರಗಳಿಂದ ಆಕೆಯ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜೇಶ್ವರಿ ಅವರನ್ನು ರೈಲ್ವೇ ಪೊಲೀಸರು ಸೈದಾಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ನಂತರ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ವರಿ ಅವರನ್ನು ಉತ್ತಮ ಚಿಕಿತ್ಸೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮಂಗಂಬಾಕ್ಕಂ ರೈಲ್ವೇ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ರಾಜೇಶ್ವರಿ ಈಗಾಗಲೇ ಮೂವರನ್ನು ಮದುವೆಯಾಗಿದ್ದು, ಆಕೆಗೆ ಮೂವರು ಗಂಡಂದಿರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಆಕೆಯ ಮೂರನೇ ಪತಿ ಕೊಲೆಯಾಗಿದ್ದಾನೆ. ಸದ್ಯ ಆಕೆ ಎರಡನೇ ಪತಿಯೊಂದಿಗೆ ಇದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆದರೆ ಈ ಕೊಲೆಗೆ ಅಕ್ರಮ ಸಂಬಂಧವೇ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಬ್ರೆಜಿಲ್‌ನಲ್ಲಿ ಪ್ರತಿ ಗಂಟೆಗೆ ಎಂಟಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ: ಎಫ್‌ಬಿಎಸ್‌ಪಿ ಸಂಸ್ಥೆ ವರದಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts