More

    ಚಲಿಸುತ್ತಿದ್ದ ಕಾರಿನಡಿ ಸಿಲುಕಿ ಸಾವಿಗೀಡಾದ ದೆಹಲಿ ಯುವತಿಯ ಮನೆಗೆ ಕನ್ನ; ಮಗಳ ಗೆಳತಿ ಮೇಲೆ ಆರೋಪ ಹೊರಿಸಿದ ಕುಟುಂಬಸ್ಥರು..!

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೊಸವರ್ಷದಂದು ಮುಂಜಾನೆ ಸುಮಾರು 15 ಕಿ.ಮೀ ದೂರದವರೆಗೆ ಕಾರಿನಿಂದ ಎಳೆದೊಯ್ಯಲ್ಪಟ್ಟು ಸಾವಿಗೀಡಾದ ಅಂಜಲಿ ಮನೆಗೆ ದರೋಡೆಕೋರರು ನುಗ್ಗಿ ಟಿವಿ ಸೇರಿದಂತೆ ಹಲವು ವಸ್ತುಗಳನ್ನು ದೋಚಿದ್ದಾರೆ.

    ಆದರೆ ಪೊಲೀಸರು ಘಟನೆಯ ಬಗ್ಗೆ ಇನ್ನೂ ಯಾವುದೇ ರೀತಿಯ ವಿವರಗಳನ್ನು ನೀಡಿಲ್ಲ. ಇಂದು (ಸೋಮವಾರ) ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ ಮನೆಯಲ್ಲಿ ದರೋಡೆ ನಡೆದಿರುವ ಬಗ್ಗೆ ಅಂಜಲಿಯ ಕುಟುಂಬ ಸದಸ್ಯರಿಗೆ ಸಾರ್ವಜನಿಕರು ತಿಳಿಸಿದ್ದಾರೆ. ದರೋಡೆಕೋರರು ಮನೆಯ ಬೀಗ ಒಡೆದು ಹಲವು ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ, ಅಮನ್ ವಿಹಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ.

    ಮಗಳ ಗೆಳತಿಯನ್ನು ದೂಷಿಸಿದ ಕುಟುಂಬಸ್ಥರು!
    ಅಂಜಲಿಯ ಸಂಬಂಧಿ ಅನು, ‘ಅಕ್ಕಪಕ್ಕದ ಮನೆಯವರು ಕಳ್ಳತನದ ಬಗ್ಗೆ ತಿಳಿಸಿದ್ದು, ನಿಧಿಯ ಕೈವಾಡದ ಶಂಕೆ ಇದೆ. ಸಿಕ್ಕಿಬೀಳುವ ಭಯದಿಂದ ನಿಧಿ ತನ್ನ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಇಡಲು ಪ್ರಯತ್ನಿಸುತ್ತಿದ್ದಾಳೆ’ ಎಂದು ಹೇಳಿದ್ದಾರೆ.

    ಅಂಜಲಿ ಸಂಬಂಧಿಕರು ಕೂಡ ಪೊಲೀಸರ ವಿರುದ್ಧ ಕಿಡಿಕಾರಿದ್ದು. “ಕಳೆದ ಎಂಟು ದಿನಗಳಿಂದ ಪೊಲೀಸರು ಇಲ್ಲಿದ್ದರು. ಆದರೆ ಅವರು ನಿನ್ನೆಯಿಂದ ಏಕೆ ಇಲ್ಲ?” ಅನು ಕೇಳಿದ್ದಾರೆ.

    ಪ್ರಕರಣವೇನು?
    ಜನವರಿ 1 ರಂದು ಅಂಜಲಿ ಮತ್ತು ನಿಧಿ ರೋಹಿಣಿ ಹೋಟೆಲ್‌ನಲ್ಲಿ ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಮಾರುತಿ ಬಲೆನೊ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ನಿಧಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ ಕಾರಿನ ಕೆಳಗೆ ಸಿಲುಕಿದ ಅಂಜಲಿಹಲವಾರು ಕಿಲೋಮೀಟರ್‌ಗಳವರೆಗೆ ಎಳೆಯಲ್ಪಟ್ಟರು.

    ಘಟನೆಯ ಪ್ರತ್ಯಕ್ಷದರ್ಶಿಯಾಗಿರುವುದರಿಂದ ಈ ಹಿಂದೆ ಪೊಲೀಸರು ನಿಧಿಯ ಹೇಳಿಕೆಯನ್ನು ಸೆಕ್ಷನ್ 164 CrPC ಅಡಿಯಲ್ಲಿ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ.

    ಏಳು ಆರೋಪಿಗಳಾದ ಅಶುತೋಷ್, ಅಂಕುಶ್ ಖನ್ನಾ, ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್, ಮಿಥುನ್ ಮತ್ತು ಮನೋಜ್ ಮಿತ್ತಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಅಂಕುಶ್‌ಗೆ ನ್ಯಾಯಾಲಯ ಇತ್ತೀಚೆಗೆ ಜಾಮೀನು ನೀಡಿತ್ತು. (ಏಜೆನ್ಸೀಸ್)
    ಇದನ್ನೂ ಓದಿ: ಕಾರಿನ ಕೆಳಗೆ ಸಿಲುಕಿದ್ದ ಮಹಿಳೆಯನ್ನು 20 ಕಿಲೋಮೀಟರ್​ ದೂರ ಎಳೆದುಕೊಂಡು ಹೋದ ಕಿರಾತಕರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts