ಬೆಂಗಳೂರು: ಗುತ್ತಿಗೆದಾರರ ಸಂಘದ ಸದಸ್ಯರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಮಾಡಿದ ಆರೋಪವನ್ನು ಮುಂದಿಟ್ಟ ಬಿಜೆಪಿ ನಾಯಕರು, ಸಿಎಂ ಇದಕ್ಕೆ ಉತ್ತರ ಕೊಡಬೇಕು, ಇನ್ನೂ ಯಾಕೆ ಬಿಲ್ ಕ್ಲಿಯರ್ ಮಾಡಿಲ್ಲ ಎಂದು ಪ್ರಶ್ನಿಸಿದ್ದರು. ಈ ಆರೋಪಗಳಿಗೆ ಇದೀಗ ಉತ್ತರಿಸಿರುವ ಡಿಕೆಶಿ, ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: VIDEO | ಡೆಹ್ರಾಡೂನ್ನಲ್ಲಿ ನೋಡನೋಡುತ್ತಿದ್ದಂತೆ ಕುಸಿದ ಕಾಲೇಜು ಕಟ್ಟಡ!
“ಬಿಜೆಪಿಗರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಅಚ್ಚರಿ ಡಾಕ್ಯುಮೆಂಟ್ ರಿಲೀಸ್ ಮಾಡುವೆ. ಇನ್ನೆರಡು ದಿನಗಳ ನಂತರ ಅದನ್ನು ಬಿಡುಗಡೆಗೊಳಿಸುತ್ತೇನೆ” ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ಗುತ್ತಿಗೆದಾರರ ವಿಚಾರವಾಗಿ ಮಾತನಾಡಿದ ಡಿಸಿಎಂ, “ಸಾಕಷ್ಟು ಜನ ಒತ್ತಾಯದಿಂದ ಮಾತನಾಡಿದ್ದಾರೆ. ಇದು ನಿಜ, ಸತ್ಯಾಂಶ ನೀವು ಸಹ ಇದೇ ರೀತಿಯಲ್ಲಿ ಬಿಂಬಿಸಿದ್ದೀರಾ. ನಾನು ಯಾವ ತಪ್ಪು ಮಾಡಿಲ್ಲ, ಯಾರಿಗೂ ಸಹ ಕಾಂಟ್ರ್ಯಾಕ್ಟ್ ಕೊಟಿಲ್ಲಾ. ಬಿಜೆಪಿ ಬಿಲ್ನ ಕ್ಲಿಯರ್ ಮಾಡುವುದಕ್ಕೆ ನಮ್ಮ ಹತ್ತಿರ ಬಂದಿದ್ದಾರೆ. ನಾವು ಕೇಸ್ಗಳನ್ನು ನೋಡಿ ಪರಿಶೀಲಿಸಿ ತದನಂತರ ಬಿಲ್ ಕ್ಲಿಯರ್ ಮಾಡುವುದಕ್ಕೆ ಮುಂದಾಗಿದ್ದೇನೆ. ಬಿಜೆಪಿಯವರು ಯಾಕೆ ಬಿಲ್ ಕ್ಲಿಯರ್ ಮಾಡಿಲ್ಲ?” ಎಂದು ಪ್ರಶ್ನಿಸಿದ್ದಾರೆ.
VIDEO | ಡೆಹ್ರಾಡೂನ್ನಲ್ಲಿ ನೋಡನೋಡುತ್ತಿದ್ದಂತೆ ಕುಸಿದ ಕಾಲೇಜು ಕಟ್ಟಡ!