ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಕಮಲ್ನಾಥ ಸಂಪುಟದಲ್ಲಿ ಕಿರಿಯ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದರು.
ಇದೀಗ ಮಗನ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ ದಿಗ್ವಿಜಯ್ ಸಿಂಗ್. ಆತ ರಾಜಕೀಯಕ್ಕೆ ಬರುವುದನ್ನು ಬಯಸಿರಲಿಲ್ಲ. ಐದು ವರ್ಷಕ್ಕೊಮ್ಮೆ ಜನಾದೇಶ ಪಡೆದುಕೊಳ್ಳಬೇಕಾಗುತ್ತದೆ. ಜತೆಗೆ, ರಾಜಕೀಯದಿಂದಾಗಿ ನಮ್ಮ ಕುಟುಂಬವೇ ಮೊದಲ ಬಲಿಪಶುವಾಗುತ್ತದೆ ಎಂದು ಆತನಿಗೆ ಹೇಳಿದ್ದೆ ಎಂದರು.
ಇದನ್ನೂ ಓದಿ; ಕರೊನಾ ಲಸಿಕೆ ತಯಾರಿಕೆಗೆ ರಷ್ಯಾ ಜತೆ ಡೀಲಿಗಿಳಿದ ಭಾರತೀಯ ಕಂಪನಿಗಳು; ಔಷಧ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವೇ ಹೆಚ್ಚುಗಾರಿಕೆ
ರಾಜಕೀಯ ರಂಗದಲ್ಲಿ ಯಾವುದು ಖಾಲಿ ಇರುವುದಿಲ್ಲ. ರಾಘೋಘರ್ ಕ್ಷೇತ್ರದಿಂದ ನನ್ನ ಮಗ ಜೈವರ್ಧನ್ ಸ್ಪರ್ಧಿಸದಿದ್ದರೆ ಬೇರೆ ಯಾರಾದರೂ ಸ್ಪರ್ಧಿಸುತ್ತಿದ್ದರು ಎಂಬುದು ಪುತ್ರ ವ್ಯಾಮೋಹದ ಬಗ್ಗೆ ಅವರ ಉತ್ತರ.
ಕಮಲ್ನಾಥ್ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವನಾಗಿದ್ದ ಜೈವರ್ಧನ್ ಒಂದು ವೇಳೆ ಮತ್ತೆ ಬಿಜೆಪಿ ಸೇರಿ ಮತ್ತೆ ಸಚಿವನಾಗುತ್ತೇನೆ ಎಂದು ಮಗನೇನಾದರೂ ನಿಮಗೆ ಹೇಳಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್ ಸಿಂಗ್. ಮಗನಾದರೂ ಆತನನ್ನು ನಾನು ಬಿಡುವುದಿಲ್ಲ. ನಂತರದ ಚುನಾವಣೆಯಲ್ಲಿ ಖಂಡಿತ ಆತನನ್ನು ಸೋಲಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್ ಒನ್…!
ಇನ್ನೊಂದೆಡೆ, ನಮ್ಮದು ತಂದೆ-ಮಗನಿಗಿಂತ ಹೆಚ್ಚಾಗಿ ಗುರು- ಶಿಷ್ಯರ ಸಂಬಂಧ ಎಂದು ಪುತ್ರ ಜೈವರ್ಧನ್ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ನಲ್ಲಿ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸವನ್ನು ಜೈವರ್ಧನ್ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ