More

    ಮನೆ ಬಾಡಿಗೆ ಕಟ್ಟಲು ಎತ್ತಿಟ್ಟಿದ್ದ ಹಣದಲ್ಲಿ ಒಡವೆ ಖರೀದಿಸಿದ ಪತ್ನಿ! ಮುಂದಾದದ್ದು ಭಾರೀ ದುರಂತ

    ಬೆಂಗಳೂರು: ಮನೆ ಬಾಡಿಗೆ ಕಟ್ಟಲು ಎತ್ತಿಟ್ಟಿದ್ದ ಹಣವನ್ನು ಒಡವೆ ಖರೀದಿಸಲು ಖರ್ಚು ಮಾಡಿದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದಯಾನಂದ‌ ನಗರದಲ್ಲಿ ನಡೆದಿರುವ ಘಟನೆಯಲ್ಲಿ ಸಾವಪ್ಪಿದ ದುರ್ದೈವಿ ನಾಜೀಯ, ಆಟೋ ಚಾಲಕನಾದ ಫಾರೂಕ್​ ಬಂಧಿತ ಪತಿ.

    ಬಾಡಿಗೆ ಆಟೋ ಓಡಿಸುತ್ತಿದ್ದ ಫಾರುಖ್ ಮತ್ತು ಪತ್ನಿ ನಾಜೀಯ 2 ವರ್ಷದಿಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಾರದ ಹಿಂದೆ ಫಾರುಖ್​​ ಪತ್ನಿಗೆ ಬಾಡಿಗೆ ಕೊಡಲು ಇಟ್ಟುಕೊಳ್ಳುವಂತೆ 6,500 ರೂ. ಹಣ ಕೊಟ್ಟಿದ್ದ. ಆದರೆ ಆ ಹಣದಲ್ಲಿ ನಾಜೀಯ ಡ್ಯೂಪ್ಲಿಕೇಟ್ ಜ್ಯುವೆಲರಿ ಖರೀದಿಸಿ ಖರ್ಚು ಮಾಡಿಕೊಂಡಿದ್ದಳು. ಬಳಿಕ ಬಾಡಿಗೆ ಹಣ ನೀಡುವಂತೆ ಪತಿ ತಿಳಿಸಿದಾಗ ಈ ವಿಚಾರ ಬಯಲಾಯಿತು.

    ಇದನ್ನೂ ಓದಿ: ಜಿಮ್ ಮಾಡೋದ್ರಿಂದಾನೆ ಸಾವು ಸಂಭವಿಸುತ್ತೆ ಅನ್ನೋದು ತಪ್ಪು: ನಟ ನೆನಪಿರಲಿ ಪ್ರೇಮ್

    ದಂಪತಿಯ ಮಧ್ಯೆ ಮಾತಿಗೆ ಮಾತು ಬೆಳೆದು, ಗಲಾಟೆ ವೇಳೆ ಫಾರುಕ್, ಪತ್ನಿ ನಾಜೀಯಾಗೆ ಕೈಯಿಂದ ಹಲ್ಲೆ ಮಾಡಿ ತಲೆಯನ್ನು ಗೋಡೆಗೆ ಜಜ್ಜಿದ್ದ. ಹಲ್ಲೆಯಿಂದ ಗಾಯಗೊಂಡ ಪತ್ನಿಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದ ಫಾರುಖ್​​ಗೆ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದ್ದು, ಆ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ನಾಜೀಯಾ ಪ್ರಾಣ ಬಿಟ್ಟಿದ್ದಳು.

    ಈ ಸಂಬಂಧ ಮೃತ ನಾಜೀಯಾ ಪೋಷಕರು ಫಾರೂಕ್​ ವಿರುದ್ಧ ಸಿದ್ದಾಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಫಾರೂಕ್​ನನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

    “ಆ ದಿನ ಪುನೀತ್​ ಮೊದಲು ಹೋದ ಕ್ಲಿನಿಕ್​​ನ ಸಿಸಿಟಿವಿ ಫೂಟೇಜ್​ ಬಿಡುಗಡೆ ಮಾಡಿ”

    ಥಿಯೇಟರ್​​ನ ಗೋಡೆಯೊಳಗೆ ಸಿಕ್ಕಿಕೊಂಡಿದ್ದ ಬೆತ್ತಲೆ ಮನುಷ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts