More

    ಕೊಡಲಿಯಿಂದ ಕೊಚ್ಚಿ ಪತ್ನಿ ಕೊಲೆ

    ಕೊಕಟನೂರ: ಪತ್ನಿ ನಡತೆಯ ಬಗ್ಗೆ ಸಂಶಯಗೊಂಡ ಪತಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಅಥಣಿ ತಾಲೂಕಿನ ಹುಲಗಬಾಳ ಹೊರವಲಯದ ಮಗದುಮ್ಮ ತೋಟದ ವಸತಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಹುಲಗಬಾಳ ಗ್ರಾಮದ ಲಕ್ಷ್ಮೀಬಾಯಿ ಸಿದ್ದರಾಯ ಮೋಳೆ (50) ಮೃತ ಮಹಿಳೆ. ಸಿದ್ದರಾಯ ನಿಂಗಪ್ಪ ಮೋಳೆ ಕೊಲೆಗೈದ ಪತಿ.

    ಘಟನೆ ಹಿನ್ನೆಲೆ: ಪತ್ನಿ ಲಕ್ಷ್ಮೀಬಾಯಿ ಹಾಗೂ ನೆರೆ-ಹೊರೆಯವರು ಮನೆಗೆ ಬಂದು ಹೋಗುವುದರ ಮೇಲೆ ನಿರಂತರ ಸಂಶಯ ಪಡುತ್ತಿದ್ದ ಸಿದ್ದರಾಯ, ಸೋಮವಾರ ಬೆಳಗ್ಗೆ ಸ್ನಾನಕ್ಕೆಂದು ನೀರು ಕಾಯಿಸಲು ಪತ್ನಿ ಹಿತ್ತಲಿಗೆ ಹೋಗಿ ಮರಳಿ ಮನೆಯೊಳಗೆ ಬರುತ್ತಿದ್ದಾಗ ಸಂಶಯದಿಂದ ಪ್ರಶ್ನಿಸಿದ್ದಾನೆ. ಇದಕ್ಕೆ ಆಕೆ ಎದುರು ಉತ್ತರ ನೀಡಿದಾಗ, ಕೋಪಗೊಂಡು ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಕೊಲೆಗೈದಿದ್ದಾನೆ.

    ಸಾವಿಗೂ ಮೊದಲು ಲಕ್ಷ್ಮೀಬಾಯಿ ಚೀರಾಟ ಕೇಳಿದ ಅಕ್ಕ ಪಕ್ಕದ ಜನರು ಆಗಮಿಸಿದಾಗ, ‘ಹತ್ತಿರ ಬಂದರೆ ನಿಮ್ಮನ್ನೂ ಕೊಚ್ಚಿ ಹಾಕುತ್ತೇನೆ’ ಎಂದು ಹೆದರಿಸಿದ್ದಾನೆ. ಹೀಗಾಗಿ ಜನರು ದೂರವಾಣಿ ಮೂಲಕ ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೆಲ ಹೊತ್ತಿನಲ್ಲಿ ಯೇ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಸಿದ್ಧರಾಯ ಪರಾರಿ ಯಾಗಲು ಯತ್ನಿಸಿದ. ಆದರೆ, ಪೊಲೀಸರು ಆತನ ಬೆನ್ನುಹತ್ತಿ ಬಂಧಿಸಿದ್ದಾರೆ.

    ಲಕ್ಷ್ಮೀಬಾಯಿ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಎಸ್.ಎ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ನಾಗರಾಜ ಹಿರೇಮಠ, ಪಿ.ಎಸ್. ಮಲಗೌಡರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts