More

    ಅಮ್ಮ ಕರೆದಾಗ ಊರಿಗೆ ಹೋಗಿದ್ರೆ ಸಾವು ಸುಳಿಯುತ್ತಿರಲಿಲ್ಲ…

    ಹುಬ್ಬಳ್ಳಿ: ಅಮ್ಮ ಕರೆದಾಗ ತಮ್ಮ ಊರಿಗೆ ಹೋಗಿದ್ರೆ ಸಾವು ಸನಿಹವೇ ಸುಳಿಯುತ್ತಿರಲಿಲ್ಲ…

    ಇಲ್ಲಿನ ಕಿಮ್ಸ್​ನಲ್ಲಿ ಎಂಬಿಬಿಎಸ್ ಹಾಗೂ ಹೌಸ್ ಸರ್ಜನ್ ಆಗಿ ಕೆಲಸ ಮಾಡಿದ್ದ ಡಾ. ಪೂಜಾ ಭಟ್ ಬುಧವಾರ ನಿಧನ ಹೊಂದಿದ್ದು, ಆಕೆಯ ಸಹಪಾಠಿಗಳು, ಪ್ರಾಧ್ಯಾಪಕ ವರ್ಗದವರಿಗೆ ಈ ಸಂಗತಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

    ಇತ್ತೀಚೆಗೆ ಏರ್ಪಾಟಾಗಿದ್ದ ಘಟಿಕೋತ್ಸವದಲ್ಲಿ ಪೂಜಾ ಭಟ್ ಪ್ರಮಾಣಪತ್ರಗಳನ್ನು ಪಡೆದಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅವರ ತಾಯಿ, ‘ಊರಿಗೆ ಹೋಗೋಣ…’ ಎಂದು ಹೇಳಿದ್ದರು. ಆದರೆ, ‘ಓರಗೆಯವರೆಲ್ಲ ಸೇರಿ ಪ್ರವಾಸ ಮಾಡಿ ಬರುತ್ತೇವೆ. ಆ ಮೇಲೆ ಊರಿಗೆ ಹೋಗೋಣ’ ಎಂದು ಪೂಜಾ ಹೇಳಿದ್ದರು. ‘ಅಂದೇ ಊರಿಗೆ ಹೋಗಿದ್ದರೆ ಸಾವು ಹತ್ತಿರ ಬರುತ್ತಿರಲಿಲ್ಲ’ ಎಂದು ಪೂಜಾ ಅವರ ಸಹಪಾಠಿ ಹಾಗೂ ಸಹೋದ್ಯೋಗಿಗಳು ಕಂಬನಿ ಮಿಡಿದರು. ಕಾಸರಗೋಡು ಮೂಲದ ಡಾ. ಪೂಜಾ ತಂದೆ ಹಿಂದೆಯೇ ತೀರಿಕೊಂಡಿದ್ದು, ತಾಯಿಗೆ ಈಕೆಯೊಬ್ಬಳೇ ಮಗಳು. ಕರುಳ ಕುಡಿಯನ್ನು ಕಳೆದುಕೊಂಡಿರುವ ಪೂಜಾ ತಾಯಿ ಈಗ ಒಬ್ಬಂಟಿಯಾಗಿದ್ದಾರೆ.

    ಅಂತಿಮ ನಮನ: ಕಾರವಾರ ಮತ್ತು ಗೋವಾ ಪ್ರವಾಸಕ್ಕೆ ಹೊರಟಿದ್ದ ವೇಳೆ ಫೆ. 2ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಾ. ಪೂಜಾ ತೀವ್ರವಾಗಿ ಗಾಯಗೊಂಡಿದ್ದರು. ಕಿಮ್್ಸ ವೈದ್ಯರು ಅವರನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಕಿಮ್್ಸ ಆವರಣದಲ್ಲಿ ಡಾ. ಪೂಜಾ ಪಾರ್ಥಿವ ಶರೀರವಿಟ್ಟು ಅಂತಿಮ ನಮನ ಸಲ್ಲಿಸಲಾಯಿತು. ನಂತರ ಕೇಶ್ವಾಪುರದ ಶವಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಪ್ರಜ್ಞೆಯಿಲ್ಲದ ಮಗಳೆದುರು ತಾಯಿ ರೋದನ: ತೀವ್ರ ಪೆಟ್ಟಾಗಿ 8 ದಿನಗಳಿಂದ ಪ್ರಜ್ಞೆಯಿಲ್ಲದೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಡಾ. ಪೂಜಾ ಅವರೊಂದಿಗೆ ತಾಯಿ ಇದ್ದರು. ಮಗಳು ತಡವಾಗಿಯಾದರೂ ಗುಣವಾಗಲಿ, ಆದರೆ, ಸ್ವಲ್ಪವಾದರೂ ಮಾತಾಡಲಿ ಎಂದು ತಾಯಿ ಕಾಯುತ್ತಿದ್ದರು. ಆದರೆ, ವಿಧಿಯಾಟ ಮಗಳನ್ನು ಸಾವಿನ ಮನೆಗೆ ಕರೆದೊಯ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts