ಬೆಂಗಳೂರು: ಸ್ಯಾಂಡಲ್ವುಡ್ನ ಡ್ರಗ್ಸ್ ನಂಟಿನ ಕುರಿತು ಇಂದು ದಿಗಂತ್ ಮತ್ತು ಐಂದ್ರಿತಾ ರೇ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಾಹಿತಿ ಕಲೆ ಹಾಕಿರುವ ಪೊಲೀಸರು, ವಿಚಾರಣೆ ಮುಗಿಸಿ ದಿಗಂತ್ ಮತ್ತು ಐಂದ್ರಿತಾ ಅವರನ್ನು ವಾಪಸ್ಸು ಕಳಿಸಿಕೊಟ್ಟಿದ್ದಾರೆ. ಅವಶ್ಯಕತೆ ಬಿದ್ದರೆ, ಮತ್ತೊಮ್ಮೆ ಸಮನ್ಸ್ ಕೊಡುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಈ ಮಧ್ಯೆ, ದಿಗಂತ್ ಅವರನ್ನು ಪೊಲೀಸರು ವಿಚಾರಣೆಗೆ ಕರೆಸಿದ್ದು, ಕನ್ನಡ ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ. ಏಕೆಂದರೆ, ದಿಗಂತ್ ಎರಡ್ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ಡ್ರಗ್ಸ್ ಮಾಫಿಯಾಗೆ ದಿಗಂತ್ ಅವರ ಹೆಸರು ತುಳುಕು ಹಾಕಿಕೊಂಡಿರುವುದರಿಂದ ಅವರ ಚಿತ್ರಗಳ ಚಿತ್ರೀಕರಣಕ್ಕೆ ಸಮಸ್ಯೆ ಎದುರಾಗಬಹುದು ಎಂದು ಭಯ ಅವರ ಚಿತ್ರಗಳ ನಿರ್ಮಾಪಕರಿಗಿದೆ.
ಇದನ್ನೂ ಓದಿ: ಜೈಲ್ ಬಳಿ ಸಂಜನಾ ಗಲ್ರಾನಿ ಕಿರಿಕ್; ‘ಚಿಕ್ಕದಾಯಿತು..ನಾನು ಹೋಗಲ್ಲ’ ಎಂದು ಕೂಗಾಟ
ದಿಗಂತ್ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಚಿತ್ರೀಕರಣ ಮುಗಿದಿದ್ದು, ‘ಗಾಳಿಪಟ 2’, ‘ಮಾರಿ ಗೋಲ್ಡ್’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಎರಡೂ ಚಿತ್ರಗಳ ಸ್ವಲ್ಪ ಭಾಗದ ಚಿತ್ರೀಕರಣವಾಗಿದ್ದು, ಚಿತ್ರ ಮುಗಿಯುವುದಕ್ಕೆ ಇನ್ನೂ ಸಮಯವಿದೆ. ಹಾಗಾಗಿ ಸಹಜವಾಗಿಯೇ ಈ ಚಿತ್ರಗಳ ತಂಡ ಆತಂಕವಾಗಿದೆ.
ಆದರೆ, ಈ ವಿಷಯವಾಗಿ ಯಾವುದೇ ಭಯ ಬೇಡ ಎಂದಿರುವ ದಿಗಂತ್, ಸೆಪ್ಟೆಂಬರ್ 18ರ ಶುಕ್ರವಾರದಿಂದ ‘ಮಾರಿ ಗೋಲ್ಡ್’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಅವರು ಈ ಪ್ರಕರಣದಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಪೊಲೀಸರಿಗೆ ಮನದಟ್ಟು ಮಾಡಿಕೊಟ್ಟಿದ್ದಾರಂತೆ. ಹಾಗೆಯೇ ಪ್ರಕರಣದ ತನಿಖೆಯಲ್ಲಿ ಸಹಕರಿಸುವುದಾಗಿ ಹೇಳಿದ್ದಾರಂತೆ. ಹಾಗಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ನಂಬಿಕೆಯಲ್ಲಿದ್ದು, ಚಿತ್ರೀಕರಣಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ರಾಗಿಣಿಗೆ ನಾನೇ ಡ್ರಗ್ಸ್ ಕೊಡುತ್ತಿದ್ದೆ… ಡ್ರಗ್ಸ್ ಅಡಗಿಸಿಟ್ಟಿರುವ ಜಾಗವನ್ನು ತೋರಿಸುವೆ’
ರಾಘವೇಂದ್ರ ನಾಯಕ್ ನಿರ್ದೇಶಿಸುತ್ತಿರುವ ‘ಮಾರಿ ಗೋಲ್ಡ್’ನ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಶಿವಮೊಗ್ಗ ಸುತ್ತಮುತ್ತ ಮುಗಿದಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಸಾಕಷ್ಟು ಹಾಸ್ಯಮಯ ಅಂಶಗಳು ಸಹ ಇವೆ ಎಂದು ಹೇಳಲಾಗುತ್ತಿದೆ.
‘ಮಾರಿ ಗೋಲ್ಡ್’ ಚಿತ್ರದಲ್ಲಿ ದಿಗಂತ್ಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸುತ್ತಿದ್ದು ಮಿಕ್ಕಂತೆ ಸಂಪತ್, ಯಶ್ ಶೆಟ್ಟಿ, ‘ಸಿದ್ಲಿಂಗು’ ಶ್ರೀಧರ್, ‘ಕಾಕ್ರೋಚ್’ ಸುಧಿ ಮುಂತಾದವರು ನಟಿಸುತ್ತಿದ್ದಾರೆ. ರಘುವರ್ಧನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ರ್ ಸಂಗೀತ ಸಂಯೋಜಿಸಿದ್ದಾರೆ.
ಸಿಸಿಬಿ ಅಧಿಕಾರಿಗಳ ಎದುರು ಎಲ್ಲವನ್ನೂ ಒಪ್ಪಿಕೊಂಡ ದಿಗಂತ್-ಐಂದ್ರಿತಾ ರೈ