ಮುಂಬೈ: ಹಾಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಅಜೇಯವಾಗಿ ಉಳಿದಿದ್ದು, ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆದ್ದು ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡವು ಸೆಮಿಫಿನಾಲೆ ಪ್ರವೇಶಿಸಿದ್ದು, ನಾಲ್ಕನೇ ಸ್ಥಾನಿಯಾಗಿ ನ್ಯೂಜಿಲೆಂಡ್ ತಂಡ ಪ್ರವೇಶಿವುದು ಬಹುತೇಕ ಖಚಿತವಾಗಿದೆ.
ಒಂದು ವೇಳೆ ನ್ಯೂಜಿಲೆಂಡ್ ತಂಡವು ನಾಲ್ಕನೇ ಸ್ಥಾನಿಯಾಗಿ ಸಮಿಫಿನಾಲೆ ಪ್ರವೇಶಿಸಿದರೆ ಭಾರತವನ್ನು ಎದುರಿಸಲಿದೆ. ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಉಳಿದಿರುವ ಭಾರತ ತಂಡವು ಭಾನುವಾರ ನೆದರ್ಲೆಂಡ್ ವಿರುದ್ಧ ಸೋತರೂ ಅಗ್ರಸ್ಥಾನಿಯಾಗಿ ಸೆಮಿಫಿನಾಲೆ ಪ್ರವೇಶಿಸಲಿದೆ.
ನಾಲ್ಕನೇ ಸ್ಥಾನಕ್ಕೆ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ಗೆ ಪ್ರಮುಖ ಸವಾಲಾಗಿದ್ದು, ಒಂದು ವೇಳೆ ಪಾಕ್ ಗೆಲ್ಲಬೇಕಾದರೆ ಶನಿವಾರ ಇಂಗ್ಲೆಂಡ್ ವಿರುದ್ಧ ನಡೆಯುವ ಪಂದ್ಯದಲ್ಲಿ ಭರ್ಜರಿ ಜಯಗಳಿಸಿ ಸೆಮಿಫಿನಾಲೆಗೆ ಲಗ್ಗೆ ಇಡಬೇಕಾಗಿದೆ. ನಾಲ್ಕಣೇ ಸ್ಥಾನಿಯಾಗಿ ನ್ಯೂಜಿಲೆಂಡ್ ತಂಡವು ಈಗಾಗಲೇ ಎಲ್ಲರ ಹಾಟ್ ಫೇವರಿಟ್ ಆಗಿದ್ದು, ಭಾರತ ಎದುರು ಆಡಬೇಕೆಂದು ಹಲವರು ಬಯಸಿದ್ದಾರೆ. ಏಕೆಂದರೆ 2019ರ ಏಕದಿನ ವಿಶ್ವಕಪ್ ಸೆಮಿಫಿನಾಲೆಯ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಜ್ಜಾಗಿ ನಿಂತಿದೆ.
ಇದನ್ನೂ ಓದಿ: “ಜೈ ಶ್ರೀರಾಮ್” ಘೋಷಣೆ ಪ್ರೀತಿ, ಏಕತೆಯ ಸಂಕೇತ: ಜಾವೇದ್ ಅಖ್ತರ್
ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡವು ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದು, ನವೆಂಬರ್ 16ರಂದು ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ಮುಖಾಮುಖಿಯಾಗಲಿವೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯಗಳಿಸಿದ್ದಲ್ಲಿ ಎರಡನೇ ಸ್ಥಾನಿಯಾಗಿ ಲೀಗ್ ಹಂತದ ಪಂದ್ಯಗಳನ್ನು ಮುಗಿಸಿ ಸೆಮಿಫಿನಲಾಗೆ ತಯಾರಿ ಆರಂಭಿಸಲಿದೆ.
ಮಳೆ ಅಡ್ಡಿಪಡಿಸಿದರೆ ಮುಂದೇನು?
ನವೆಂಬರ್ 15 ಹಾಗೂ 16ರಂದು ನಡೆಯುವ ಸೆಮಿಫಿನಾಲೆ ಪಂದ್ಯಕ್ಕೆ ಮಳೆ ಅಡ್ಡಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಏಕೆಂದರೆ ಮುಂಬೈ ಹಾಗೂ ಕಲ್ಕತ್ತಾದಲ್ಲಿ ನಾಕ್ಔಟ್ ಪಂದ್ಯಗಳು ನಡೆಯಲಿದ್ದು, ಈ ಎರಡು ನಗರಗಲು ಸಮುದ್ರಕ್ಕೆ ಹತ್ತಿರವಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯಕ್ಕೆ ಅಡಚಣೆ ಉಂಟಾದರೆ ಮೀಸಲು ದಿನದಂದು ಪಂದ್ಯ ನಡೆಸಲಾಗುತ್ತದೆ.
ಒಂದು ವೇಳೆ ಮೀಸಲು ದಿನವು ಪಂದ್ಯಕ್ಕೆ ಮಳೆ ಅಡ್ಡಪಡಿಸಿದರೆ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಉತ್ತಮ ರನ್ರೇಟ್ ಹಾಗೂ ಗೆಲುವಿನ ಲೆಕ್ಕಚಾರದ ಮೇಲೆ ಫಿನಾಲೆ ಪ್ರವೇಶಿಸಲಿದೆ. ಒಂದು ವೇಳೆ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾಗೆ ಆದಲ್ಲಿ ಟೀಂ ಇಂಡಿಯಾ ನೇರವಾಗಿ ಫಿನಾಲೆ ಪ್ರವೇಶಿಸಲಿದೆ. ಈ ಮೂಲಕ ಭಾರತ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್ ಸೆಮಿಫಿನಲಾಎ ಸೋಲನ್ನು ತೀರಿಸಿಕೊಂಡಂತಾಗುತ್ತದೆ.