blank

ಗೆಜ್ಜಗಾರ ಘಟ್ಟಿವಾಳಯ್ಯ ವಚನಗಳು ಸಾರ್ವಕಾಲಿಕ

blank


ಮೈಸೂರು : ನಂಜನಗೂಡು ನಗರದ ಹೊರವಲಯದ ನಂಜುಂಡೇಶ್ವರ ಟೌನ್‌ಶಿಪ್‌ನಲ್ಲಿರುವ ಅನುರಾಗ್ ಮಕ್ಕಳ ಮನೆಯಲ್ಲಿ ಭಾನುವಾರ ಗೆಜ್ಜಗಾರ ಘಟ್ಟಿವಾಳಯ್ಯ ಜಯಂತಿ ಆಚರಿಸಲಾಯಿತು.

blank


ಶರಣ ಚಿಂತಕ ಹಲ್ಲರೆ ಶಿವಬುದ್ದಿ ಮಾತನಾಡಿ, ವಿಶ್ವಗುರು ಬಸವಣ್ಣ ಅವರ 770 ಅಮರಗಂಗಗಳಲ್ಲಿ ಶರಣ ಘಟ್ಟಿವಾಳಯ್ಯ ಕೂಡ ಒಬ್ಬರು. ಅವರು ಬರೆದಿರುವ 147 ವಚನಗಳು ಸಾರ್ವಕಾಲಿಕವಾಗಿವೆ ಎಂದರು.


ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ಅಧ್ಯಕ್ಷ ಡಿ.ಪಿ.ಮಲ್ಲೇಶ್ ಮಾತನಾಡಿ, ಘಟ್ಟಿವಾಳಯ್ಯ ಅವರ ವಚನಗಳನ್ನು ಸಾರ್ವತ್ರಿಕವಾಗಿ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರ ಜಯಂತಿಯನ್ನು ರಾಜ್ಯಾದ್ಯಂತ ಆಯೋಜಿಸಿ ಪರಿಚಯಿಸುವ ಕಾರ್ಯ ಮಾಡಲಾಗುವುದು. ಜತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

blank

ಅನುರಾಗ್ ಮಕ್ಕಳ ಮನೆ ಸಂಸ್ಥಾಪಕ ಅಧ್ಯಕ್ಷ ಡಿ.ಜೆ.ಸೋಮಶೇಖರಮೂರ್ತಿ, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ, ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ಉಪಾಧ್ಯಕ್ಷ ಮಹದೇವ್ ಕೋಟೆ, ಗೌರವ ಅಧ್ಯಕ್ಷ ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿ ಗೋಳೂರು ಸ್ನೇಕ್ ಬಸವರಾಜು, ಪ್ರಧಾನ ಕಾರ್ಯದರ್ಶಿ ಮಹೇಶ್, ಖಜಾಂಚಿ ಶಶಿ ತಾರಕ್, ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರಮೇಶ್, ಮಹೇಶ್, ಅಶೋಕ್, ಶಿವನಂಜಶೆಟ್ಟಿ, ಸಿದ್ದಪ್ಪಾಜಿ, ಮೋಹನ್, ಮಲ್ಲಿಕಾರ್ಜುನ್, ಶೇಖರ್, ಕುಮಾರ್ ಉಪಸ್ಥಿತರಿದ್ದರು.

Share This Article

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…