More

    ಮತದಾನದ ಚಿತ್ರೀಕರಣ ಮಾಡಿ: ತಹಸೀಲ್ದಾರ್ ಸುರೇಶ ವರ್ಮಾ ಹೇಳಿಕೆ

    ಸಿರವಾರ: ತಾಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು.

    ಇದನ್ನೂ ಓದಿ: ಹಲವು ಗ್ರಾಪಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ


    ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಗೌಪ್ಯ ಮತದಾನ ನಡೆಯಲಿದ್ದು, ಸದಸ್ಯರು ಮತದಾನ ಮಾಡುವ ವೇಳೆ ಕಡ್ಡಾಯವಾಗಿ ಚಿತ್ರೀಕರಣ ಮಾಡಬೇಕು. ಇದಕ್ಕಾಗಿ ಕ್ಯಾಮರಾಮನ್ ನೇಮಕ ಮಾಡಬೇಕು. ಮತದಾನದ ವೇಳೆ ಸದಸ್ಯರನ್ನು ಹೊರತುಪಡಿಸಿ ಅವರ ಕುಟುಂಬಸ್ಥರ ಪ್ರವೇಶ ಮತ್ತು ಮಧ್ಯಸ್ಥಿಕೆಗೆ ಅವಕಾಶ ನೀಡಬಾರದು. ಮತದಾನ ವೇಳೆ ಪಿಡಿಒ, ಗೊತ್ತುಪಡಿಸಿದ ಅಧಿಕಾರಿ, ಗ್ರಾಪಂ ಸಿಬ್ಬಂದಿ, ಪೊಲೀಸ್ ಇಲಾಖೆ ಹೊರತುಪಡಿಸಿ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts