More

    ಮತದಾರರು ಆಮಿಷಕ್ಕೆ ಒಳಗಾಗದಿರಲಿ

    ನರಗುಂದ: ಸದೃಢ ಭಾರತ ನಿರ್ವಣಕ್ಕೆ ಯುವ ಮತದಾರರು ಕಡ್ಡಾಯವಾಗಿ ಮತದಾನದ ಕೊಡುಗೆ ನೀಡಬೇಕು. ಎಲ್ಲ ದಾನಗಳಿಗಿಂತ ಮತದಾನ ಅತ್ಯಂತ ಮಹತ್ವವಾದದ್ದು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

    ಬಿಜೆಪಿ ಯುವ ಮೋರ್ಚಾ ನರಗುಂದ ತಾಲೂಕು ಘಟಕ, ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸ್ವತಂತ್ರ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಪಟ್ಟಣದ ಬಿಇಡಿ ಕಾಲೇಜ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಮೋ ನವ ಮತದಾತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಜ್ಞಾವಂತ ವಿದ್ಯಾರ್ಥಿಗಳು ಮತವನ್ನು ಯಾವುದೇ ಜಾತಿ, ಮತ, ಪಂಥ, ಆಮಿಷಗಳಿಗೆ ಮಾರಿಕೊಳ್ಳಬಾರದು ಎಂದರು. ಕಾರ್ಯಕ್ರಮದ ನಂತರ ರಾಷ್ಟ್ರೀಯ ಯುವ ಮತದಾರರ ದಿನಾಚರಣೆ ಅಂಗವಾಗಿ ಬಿಜೆಪಿಯಿಂದ ಆಯೋಜಿಸಿದ್ದ ನರೇಂದ್ರ ಮೋದಿಯವರ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಲಾಯಿತು. ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧೇಶ ಹೂಗಾರ, ತಾಲೂಕಾಧ್ಯಕ್ಷ ವಿಠ್ಠಲ ಹವಾಲ್ದಾರ, ನರಗುಂದ ಮಂಡಲಾಧ್ಯಕ್ಷ ಅಜ್ಜನಗೌಡ ಪಾಟೀಲ, ಮಹೇಶಗೌಡ ಪಾಟೀಲ, ಮಂಜು ಮೆಣಸಗಿ, ಕಾಲೇಜ್ ಪ್ರಾಚಾರ್ಯ ಆರ್.ಬಿ.ಪಾಟೀಲ, ಮಹೇಶಗೌಡ ಪಾಟೀಲ, ಮಹೇಶ ಹಟ್ಟಿ, ಹನುಮಂತ ಹವಾಲ್ದಾರ, ಬಸವರಾಜ ಹುಲಕುಂದ, ರಾಚನಗೌಡ ಪಾಟೀಲ, ಶಿವರಾಜ ಕಲ್ಲಾಪೂರ, ಇತರು ಉಪಸ್ಥಿತರಿದ್ದರು. ಎಸ್.ಆರ್. ಮೇಟಿ ಹಾಗೂ ಮಹಾಬಳೇಶ್ವರ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts