More

    ಚಂದ್ರಚೂಡ್ ನಡೆಗೆ ವ್ಯಾಪಕ ಟೀಕೆ; ಬಿಗ್ ಬಾಸ್​ನಿಂದ ಹೊರಕಳಿಸಲು ಆಗ್ರಹ

    ಬೆಂಗಳೂರು: ‘ಬಿಗ್ ಬಾಸ್ – ಸೀಸನ್ 8’ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್, ಮನೆಯಿಂದ ಹೊರಬಂದಿದ್ದಾರೆ. ಅವರು ಹೊರಬರುವಾಗ ಇನ್ನೊಬ್ಬ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಮಾಡಿದ ಒಂದು ಕೆಲಸಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ. ‘ಬಿಗ್ ಬಾಸ್’ನ ಮೊದಲನೇ ಇನ್ನಿಂಗ್ಸ್ ನಲ್ಲಿ ಚಕ್ರವರ್ತಿ ಮತ್ತು ಪ್ರಿಯಾಂಕಾ ನಡುವೆ ಒಳ್ಳೆಯ ಸ್ನೇಹ ಇತ್ತು. ಲಾಕ್​ಡೌನ್​ನಿಂದ ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡು, ಮನೆಯಿಂದ ಹೊರಗೆ ಬಂದಾಗಲೂ ಇಬ್ಬರೂ ಸ್ನೇಹಿತರಾಗಿದ್ದರು. ಎರಡನೇ ಇನ್ನಿಂಗ್ಸ್ ಪ್ರಯುಕ್ತ ವಾಪಸ್ಸು ಮನೆಗೆ ಹೋದಾಗ, ಅವರಿಬ್ಬರ ನಡುವೆ ಕಾರಣಾಂತರಗಳಿಂದ ಜಗಳ ಆಗಿತ್ತು, ಈ ವಿಷಯ ಸುದೀಪ್ ಎದುರೂ ಚರ್ಚೆಯಾಗಿದ್ದು, ರಾಜಿ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.

    ಭಾನುವಾರ ರಾತ್ರಿ ಪ್ರಿಯಾಂಕಾ ಎಲಿಮಿನೇಟ್ ಆಗಿ ಮನೆಯಿಂದ ಹೊರಬರುವ ವೇಳೆ ಆಕೆಗೆ ವಿಶೇಷ ಅಧಿಕಾರವೊಂದನ್ನು ನೀಡಲಾಯಿತು. ಅದರಂತೆ, ಮುಂದಿನ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಹೇಳಲಾಯಿತು. ಅಗ ಪ್ರಿಯಾಂಕಾ, ಚಕ್ರವರ್ತಿ ಅವರ ಹೆಸರನ್ನು ಹೇಳುವ ಮೂಲಕ ನೇರವಾಗಿ ನಾಮಿನೇಟ್ ಮಾಡಿದರು. ಇದರಿಂದ ಅಸಮಾಧಾನಗೊಂಡ ಚಕ್ರವರ್ತಿ, ಪ್ರಿಯಾಂಕಾಗೆ ಅಶ್ಲೀಲವಾಗಿ ಸನ್ನೆ ಮಾಡಿದ್ದಾರೆ. ‘ಬಿಗ್ ಬಾಸ್’ ಪ್ರಾರಂಭವಾಗಿ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು, ಇನ್ನೊಬ್ಬ ಸ್ಪರ್ಧಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆ ಎದುರಾಗಿದೆ. ನೆಟ್ಟಿಗರು, ಚಂದ್ರಚೂಡ್ ಅವರ ನಡೆಯನ್ನು ಖಂಡಿಸಿದ್ದು, ಕೆಲವರು ಅವರಿಗೆ ಸೂಕ್ತ ಶಿಕ್ಷೆ ಕೊಡಬೇಕು ಎಂದರೆ, ಇನ್ನೂ ಕೆಲವರು ತಕ್ಷಣವೇ ಚಂದ್ರಚೂಡ್ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಖಂಡಿಸದಿದ್ದಕ್ಕೆ ಬೇಸರ: ಇದಲ್ಲದೆ, ಕಳೆದ ವಾರ ಚಕ್ರವರ್ತಿ ಚಂದ್ರಚೂಡ್ ಮಾಡಿದ ಅವಾಂತರಕ್ಕೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬಹುದು ಎಂದು ವೀಕ್ಷಕರ ಅಂದಾಜಾಗಿತ್ತು. ಕಳಪೆ ಪಟ್ಟ ಹೊತ್ತ ಚಂದ್ರಚೂಡ್ ಜೈಲಿಗೆ ಹೋಗಿ ಅಲ್ಲಿ ಸಾಕಷ್ಟು ರಾದ್ಧಾಂತ ಮಾಡಿದ್ದರು. ಅವರ ಗಲಾಟೆಗೆ ಮನೆಯವರು ಬೇಸತ್ತಿದ್ದರು. ಈ ಕುರಿತು ಚಂದ್ರಚೂಡ್​ಗೆ ತಮ್ಮ ವೀಕೆಂಡ್ ಎಪಿಸೋಡ್​ಗಳಲ್ಲಿ ಸುದೀಪ್ ಎಚ್ಚರಿಸಬಹುದು ಎಂದು ವೀಕ್ಷಕರು ಭಾವಿಸಿದ್ದು ಸುಳ್ಳಾಗಿದೆ. ಈ ಹಿಂದಿನ ವಾರಗಳಲ್ಲಿ ಚಂದ್ರಚೂಡ್​ಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತಗೆದುಕೊಳ್ಳುವ ಮೂಲಕ ವೀಕ್ಷಕರ ಮನಗೆದ್ದಿದ್ದರು. ಈ ವಾರವು ಅದು ಮುಂದುವರೆ ಯಬಹುದು ಎಂದು ವೀಕ್ಷಕರ ಯೋಚನೆ ಸುಳ್ಳಾಗಿದೆ. ಚಕ್ರವರ್ತಿ ಬಗ್ಗೆ ಸುದೀಪ್ ಅಷ್ಟೇನೂ ಮಾತನಾಡಿದ್ದರ ಬಗ್ಗೆ ಹಲವರು ಬೇಸರಗೊಂಡಿದ್ದು, ಈ ಬೇಸರವನ್ನು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಮುಂದಿನ ವಾರವಾದರೂ ಚಂದ್ರಚೂಡ್​ಗೆ ತಕ್ಕ ಪಾಠ ಕಲಿಸಬೇಕು ಎಂದು ಸುದೀಪ್ ಅವರಿಗೆ ಆಗ್ರಹಿಸಿದ್ದಾರೆ.

    ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅರೆಸ್ಟ್​: ಅಶ್ಲೀಲ ಸಿನಿಮಾ ತಯಾರಿಸಿ ಪ್ರಸಾರ ಮಾಡುತ್ತಿದ್ದ ಆರೋಪ

    ರಾಜಕಾರಣಿಗಳೇ ಈತನ ಟಾರ್ಗೆಟ್, ಬಲೆ ಬೀಸಿದ್ದು ಒಬ್ಬಿಬ್ಬರಿಗಲ್ಲ!; ಶಾಸಕರ ಹೆಸರಿನಲ್ಲಿ ಶಾಸಕಿಗೇ ವಂಚಿಸಿ ಕೊನೆಗೂ ಸಿಕ್ಕಿಬಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts