ಬೆಂಗಳೂರು: ಬಿಗ್ಬಾಸ್ ಸೀಸನ್ 8 ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಬಿಗ್ಬಾಸ್ನಿಂದ ಗಾಯಕ ವಿಶ್ವನಾಥ ಹೊರಗೆ ಬಂದಿದ್ದಾರೆ. ಹೊರಗೆ ಬಂದಿರುವ ವಿಶ್ವನಾಥ ಈ ಇಬ್ಬರು ಸ್ಪರ್ಧಿಗಳು ಸಕತ್ ಸ್ಟ್ರಾಟರ್ಜಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ದೊಡ್ಮನೆಯಿಂದ ಹೊರಗೆ ಬಂದಿರುವ ವಿಶ್ವನಾಥ ಅವರನ್ನು ವಾಹಿನಿಗಳು ಸಂದರ್ಶನ ಮಾಡಲಾರಂಭಿಸಿವೆ. ಅದೇ ರೀತಿ ಖಾಸಗಿ ಚಾನೆಲ್ ಒಂದರಲ್ಲಿ ಸಂದರ್ಶನ ಮಾಡುವಾಗ, ಮನೆಯಲ್ಲಿ ಹೆಚ್ಚು ಸ್ಟ್ರಾಟರ್ಜಿ ಮಾಡುವವರು ಯಾರೆಂದು ನಿಮಗೆನಿಸುತ್ತದೆ ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತದೆ. ಅದಕ್ಕೆ ವಿಶ್ವನಾಥ ಮೊದಲ ವ್ಯಕ್ತಿಯಾಗಿ ಅರವಿಂದ್ನನ್ನು ಹೆಸರಿಸುತ್ತಾರೆ. ಅದಾದ ನಂತರ ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವ ಚಕ್ರವರ್ತಿ ಚಂದ್ರಚೂಡ್ ಕೂಡ ಸ್ಟ್ರಾಟರ್ಜಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ಗಾಯಕನಾಗಿ ಗುರುತಿಸಿಕೊಂಡು ಬಿಗ್ಬಾಸ್ ಮನೆಗೆ ಹೋಗಿದ್ದ ವಿಶ್ವನಾಥ ಆರಂಭದಲ್ಲಿ ಹೆಚ್ಚು ಮೌನವಾಗಿರುತ್ತಿದ್ದರು. ಆದರೆ ಕಳೆದ ಕೆಲ ವಾರಗಳಿಂದ ಉತ್ತಮ ಪ್ರದರ್ಶನ ನೀಡಿದ್ದರು. ಬಿಗ್ಬಾಸ್ ಮನೆಗೆ ಹೋದ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ ಎನ್ನುವ ಪಟ್ಟ ಇವರಿಗಿದೆ. (ಏಜೆನ್ಸೀಸ್)