More

    ಎಂದೂ ನೀವಿಲ್ಲ ಎಂದುಕೊಂಡಿಲ್ಲ.. ಚಿಕ್ಕವನು ನಾನು.. ಕೈ ಹಿಡಿದು ಮುನ್ನಡೆಸಿ; ಅನಿರುದ್ಧ್​

    ಬೆಂಗಳೂರು: ಇಂದು(ಸೆ.18) ಸಾಹಸಸಿಂಹ ಡಾ. ವಿಷ್ಣುವರ್ಧನ್​ ಅವರ ಜನ್ಮದಿನ. ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ನಮ್ಮನ್ನಗಲಿ 9 ವರ್ಷ ಕಳೆದರೂ ಅವರ ನೆನಪು ಅಜರಾಮರ. ಅವರ ಅಳಿಯ ಅನರುದ್ದ್ ಸೇರಿದಂತೆ ಚಿತ್ರರಂಗದ ಕಲಾವಿದರು, ರಾಜಕಾರಣಿಗಳು, ಅಭಿಮಾನಿಗಳು ವಿಷ್ಣುದಾದಗೆ ಶುಭಕೋರಿದ್ದಾರೆ. ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಕುರಿತ ಪುಟ್ಟ ಮಾಹಿತಿ ಇಲ್ಲಿದೆ.

    ‘ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ‌ಅವರ ಸಜ್ಜನಿಕೆ.. ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತ ಆಗುವವರೆಂದರೆ ನನಗೆ ಅದು ನೀವೆ. ಎಂದೂ ನೀವಿಲ್ಲವೆಂದುಕೊಂಡಿಲ್ಲ. ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಲೇ ಇದ್ದೀರಿ. ಜನ್ಮದಿನವಿಂದು, ಚಿಕ್ಕವನು ನಾನು.. ನಾನೇನನು ಹೇಳಲಿ.. ಎಲ್ಲರಿಗೂ ನಿಮ್ಮ ಆಶೀರ್ವಾದವಿರಲಿ.. ಎಂದಿನಂತೆ ಕೈ ಹಿಡಿದು ಮುನ್ನಡೆಸಿ’. ಎಂದು ವಿಷ್ಣುವರ್ಧನ್​ ಅಳಿಯ, ನಟ ಅನಿರುದ್ಧ್ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂಓದಿರಿ ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಸಿಎಂ ಬಿಎಸ್​​ವೈ ಭೂಮಿ ಪೂಜೆ

    ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ‌ಅವರ…

    Posted by Anirudh on Thursday, September 17, 2020

    ಗುರುವಾರವೇ ವಿಷ್ಣು ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದ ನಟ ಕಿಚ್ಚ ಸುದೀಪ್, ‘ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ’ ಎಂದು ಟ್ವೀಟ್​ ಮಾಡಿದ್ದರು.

    ತನ್ನ ಟ್ವಿಟರ್​ ಖಾತೆಯಲ್ಲಿ ವಿಷ್ಣುದಾದ ಅವರ ಫೊಟೋ ಹಾಕಿರುವ ಚಾಲೇಂಜಿಂಗ್​ ಸ್ಟಾರ್​ ದರ್ಶನ್​, ‘ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ.ವಿಷ್ಣು ಸರ್ ಅವರ 70ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

    ವಿಷ್ಣುವರ್ಧನ್ ಅವರೊಂದಿಗೆ ಇರುವ ತನ್ನ ಬಾಲ್ಯದ ಫೋಟೋವನ್ನು ಟ್ವಿಟರ್​ನಲ್ಲಿ ಅಪ್ಲೋಡ್​ ಮಾಡಿಕೊಂಡಿರುವ ಪುನೀತ್ ರಾಜ್​ಕುಮಾರ್​, ವಿಷ್ಣು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

    ‘ನಮ್ಮ ಚಲನಚಿತ್ರೋದ್ಯಮ ಕಂಡ ಶ್ರೇಷ್ಠ ಕಲಾವಿದರು ನೀವು. ನಿಮ್ಮ ವರ್ಚಸ್ಸು ನಮ್ಮಲ್ಲಿ ನೆಲೆಸಲಿ ವಿಷ್ಣುವರ್ಧನ್​ ಸರ್’ ಎಂದಿರುವ ನಟ ರಕ್ಷಿತ್​ ಶೆಟ್ಟಿ, ‘ಅಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣುದಾದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಟ್ವೀಟ್​ ಮಾಡಿದ್ದಾರೆ.

    ಹಾಗೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕೂಡ ವಿಷ್ಣುದಾದಗೆ ಶುಭಕೋರಿದ್ದಾರೆ. ‘ಸಾಹಸಸಿಂಹ ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರನ್ನು ಮನದುಂಬಿ ಸ್ಮರಿರುತ್ತೇನೆ. ಅವರ ನಟನೆಯ ಭಾವನಾತ್ಮಕ ದೃಶ್ಯಗಳು ಇಂದಿಗೂ ನನ್ನನ್ನು ಕಾಡುತ್ತವೆ. ಅವರನ್ನು ಆದರ್ಶವಾಗಿರಿಸಿಕೊಂಡು ಕಲಾ ಸೇವೆ ನಡೆಸುತ್ತಿರುವ ಅವರ ಕುಟುಂಬಕ್ಕೆ ಮತ್ತು ಸಮಾಜ ಸೇವೆ ನಡೆಸುತ್ತಿರುವ ಅಭಿಮಾನಿಗಳ ಜತೆಗೆ ಈ ಸಂಭ್ರಮದ ಸ್ಮರಣೆಯಲ್ಲಿ ನಾನು ಭಾಗಿಯಾಗುತ್ತೇನೆ’ ಎಂದು ಟ್ವೀಟ್​ ಮಾಡಿದ್ದಾರೆ.

    ವಿಷ್ಣು ವಿರಾಟ ರೂಪ: ಇಂದು ಸಾಹಸ ಸಿಂಹನ ಜನ್ಮದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts