ಬೆಳಗಾವಿ: ಸುದ್ದಿ ಮಾಡಿದ ಕೆಲವೇ ಗಂಟೆ-ಗಳಲ್ಲಿ ವಿವಾದಿತ ಚರ್ಚ್ ಕಟ್ಟಡ ಕಾಮಗಾರಿಗೆ ಬ್ರೇಕ್ ಬಿದ್ದಿದೆ. ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಚರ್ಚ್ ನಿರ್ಮಾಣ ಆಗುತ್ತಿರುವುದನ್ನು ನಿನ್ನೆಯಷ್ಟೇ ವಿಜಯವಾಣಿ, ದಿಗ್ವಿಜಯ ನ್ಯೂಸ್ ವರದಿ ಮಾಡಿತ್ತು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಸರ್ವೆ ನಂಬರ್ ೫೭೬ ರಲ್ಲಿ ನಡೀತಿದ್ದ ಚರ್ಚ್ ಕಾಮಗಾರಿ ನಡೆಯುತ್ತಿತ್ತು. ಇದಕ್ಕೆ ಗ್ರಾಮಸ್ಥರು ಸೇರಿದಂತೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು.
ಈ ಕುರಿತು ಸೋಮವಾರ ಸುದ್ದಿ ಪ್ರಕಟವಾಗಿತ್ತು. ಈ ಬೆನ್ನಲ್ಲೇ ಇಂದು ಬೆಳಗ್ಗೆ ಸೋಮಾವ ಸಂಜೆ ಗ್ರಾಮಕ್ಕೆ ಕಂದಾಯ, ಮುಜರಾಯಿ, ತಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಎರಡೂ ಗುಂಪಿನವರಿಗೂ ಸಂಧಾನ ಸಭೆ ನಡೆಸಿದ್ದಾರೆ. ಈ ಬಳಿಕ ಅನಧಿಕೃತ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಸೂಚಿಸಿದ್ದಾರೆ.
ಕಟ್ಟಡ ಜಾಗವನ್ನು ಅಧಿಕೃತಗೊಳಿಸಿದ ನಂತರ ಕಟ್ಟಡ ನಿರ್ಮಾಣ ಮಾಡಿ ಅಲ್ಲಿವರೆಗೂ ಕಟ್ಟಡ ಕಟ್ಟಲು ಕೈ ಹಾಕಬಾರದು ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)