More

    ವಿಜಯವಾಣಿ-ದಿಗ್ವಿಜಯ ಕೃಷ್ಣ ವೇಷ ಫೋಟೋ ಸ್ಪರ್ಧೆ, ಭಾವಚಿತ್ರ ಕಳುಹಿಸಲು ಆಗಸ್ಟ್ 22 ಕೊನೆಯ ದಿನ

    ಮಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ವಿಜಯವಾಣಿ-ದಿಗ್ವಿಜಯ ಸುದ್ದಿವಾಹಿನಿ ಕೃಷ್ಣ ವೇಷ ಫೋಟೋ ಸ್ಪರ್ಧೆಯನ್ನು ಆಯೋಜಿಸಿದೆ. ಹಾಂಗ್ಯೊ ಐಸ್‌ಕ್ರೀಂ ಸಂಸ್ಥೆ ಈ ಬಾರಿಯೂ ಸ್ಪರ್ಧೆಯ ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿದೆ.

    ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫೋಟೋಗಳು ಕಚೇರಿಗೆ ಬರಲಾರಂಭಿಸಿದ್ದು, ಆಗಸ್ಟ್ 22ರವರೆಗೂ ಕಳುಹಿಸಲು ಅವಕಾಶವಿದೆ. ಆಕರ್ಷಕ ಬಹುಮಾನಗಳು ಬಹುಮಾನ ಗೆಲ್ಲುವ ಪುಟಾಣಿಗಳಿಗಾಗಿ ಕಾದಿವೆ. ಓದುಗರು 6X9 ಅಳತೆಯ ಫೋಟೋಗಳನ್ನಷ್ಟೇ ಕಳುಹಿಸಬೇಕು.

    10 ವರ್ಷ ವಯಸ್ಸಿನೊಳಗಿನ ಮಕ್ಕಳ ಭಾವಚಿತ್ರಗಳಿಗೆ ಮಾತ್ರ ಅವಕಾಶ. ಒಂದು ಮಗುವಿನ ಎಷ್ಟು ಫೋಟೋಗಳನ್ನೂ ಕಳುಹಿಸಬಹುದು. ಕಳೆದ ವರ್ಷ ತೆಗೆದ ಚಿತ್ರಗಳನ್ನು ಹಾಗೂ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಎಡಿಟ್ ಮಾಡಿದ ಫೋಟೋಗಳಿಗಿಂತ ನೈಜ ಚಿತ್ರಗಳಿಗೆ ಆದ್ಯತೆ.

    ಭಾವಚಿತ್ರದ ಹಿಂಬದಿಯಲ್ಲಿ ಮಗುವಿನ ಹೆಸರು, ಜನ್ಮ ದಿನಾಂಕ, ಊರು, ವಿಳಾಸ, ದೂರವಾಣಿ, ಶಾಲೆಯ ಹೆಸರು, ತರಗತಿಯನ್ನು ಸ್ಪಷ್ಟವಾಗಿ ಬರೆದಿರಬೇಕು. ಜನ್ಮ ದಿನಾಂಕವನ್ನು ಸಾಬೀತುಪಡಿಸುವ ದಾಖಲೆ ಯನ್ನೂ ಕಳುಹಿಸಬೇಕು. ಆಗಸ್ಟ್ 22ರ ಅನಂತರ ಬಂದ ಫೋಟೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ತೀರ್ಪುಗಾರರ ನಿರ್ಣಯವೇ ಅಂತಿಮ.

    ವಿಳಾಸ: ಫೋಟೋಗಳನ್ನು ಸಂಪಾದಕರು, ವಿಜಯವಾಣಿ, ವಿಆರ್‌ಎಲ್ ಕಾಂಪ್ಲೆಕ್ಸ್, ಬಂಗ್ರಕೂಳೂರು, ಮಂಗಳೂರು ಅಥವಾ ಸಂಪಾದಕರು, ವಿಜಯವಾಣಿ, ಮಾನಸ ಟವರ್ಸ್‌, ಮೂರನೇ ಮಹಡಿ, ಎಂ.ಜಿ.ರಸ್ತೆ, ಮಂಗಳೂರು ಈ ವಿಳಾಸಗಳಿಗೆ ಕಳುಹಿಸಬೇಕು. ಮಾಹಿತಿಗೆ: (0824)2456858, 8884411682.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts