ಬೆಂಗಳೂರು: ದಸರಾ ಹಿನ್ನೆಲೆಯಲ್ಲಿ ಇಂದು ವಿಜಯವಾಣಿ ದಸರಾ ಮೆರುಗು ಎಂಬ ವಿಚಾರವಾಗಿ ಕ್ಲಬ್ಹೌಸ್ ಸಂವಾದ ಹಮ್ಮಿಕೊಂಡಿದ್ದು, ಅದೀಗಾಗಲೇ ಆರಂಭಗೊಂಡಿದೆ. ನಿವೃತ್ತ ಪ್ರಾಧ್ಯಾಪಕ, ಪ್ರೊ. ಎನ್.ಎಸ್. ರಂಗರಾಜು, ಕೆಎಸ್ಒಯುನ ಪ್ರಾಚೀನ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮುಖ್ಯಸ್ಥರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಮತ್ತು ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ದಸರಾ ಸಂಪ್ರದಾಯ, ಪರಂಪರೆ, ಆಚರಣೆ ವಿಧಾನ ಕುರಿತು ಮಾತನಾಡುತ್ತಿದ್ದಾರೆ.
ಮೊದಲಿಗೆ ಮಾತನ್ನು ಆರಂಭಿಸಿರುವ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ನವರಾತ್ರಿ ಹಿನ್ನೆಲೆಯನ್ನು ವಿವರಿಸುತ್ತಿದ್ದಾರೆ. ಸಮಸ್ತ ಕಷ್ಟಗಳನ್ನು ಹೋಗಲಾಡಿಸುವ ತಾಯಿ, ಕಾಪಾಡುವ ಶಕ್ತಿ ದೇವಿ ಎಂಬುದು ದುರ್ಗಾಸೂಕ್ತದಲ್ಲಿ ಉಲ್ಲೇಖವಾಗಿದೆ. ಹರಪ್ಪ-ಮೊಹೆಂಜೊದಾರೋದಲ್ಲಿ ಮಾತೃದೇವತೆಗಳ ಪೂಜೆಗಳ ಸುಳಿವುಗಳು ಸಿಕ್ಕಿವೆ. ಮಾತ್ರವಲ್ಲ ರಾಮಾಯಣ-ಮಹಾಭಾರತದಲ್ಲೂ ದುರ್ಗಾಪೂಜೆಯ ಉಲ್ಲೇಖಗಳಿವೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಮೂತ್ರ ವಿಸರ್ಜನೆಗೆ ಹೋಗಿ ಪ್ರಾಣ ಕಳೆದುಕೊಂಡ ಯುವಕ; ಕ್ಷಣಮಾತ್ರದಲ್ಲಿ ಸ್ಥಳದಲ್ಲೇ ಸಾವು!
ಮಹಾಭಾರತದಲ್ಲಿ ಪಾಂಡವರು ಆಯುಧವನ್ನು ಮರಳಿ ಪಡೆದ ದಿನವೇ ಆಯುಧಪೂಜೆ ಎಂದಿರುವ ಶೆಲ್ವಪಿಳ್ಳೈ ಅಯ್ಯಂಗಾರ್ ಅವರು, ನಮ್ಮ ಮನಸಲ್ಲಿನ ಕೆಟ್ಟ ಯೋಚನೆಯೇ ಒಂಥರಾ ರಕ್ತಬೀಜಾಸುರ. ಅಂಥ ಕೆಟ್ಟದ್ದರ ವಿರುದ್ಧ ಇರುವುದೇ ದೇವೀಶಕ್ತಿ. ಮಾತ್ರವಲ್ಲ ಮನಸನ್ನು ನಿಯಂತ್ರಣದಲ್ಲಿ ಇರಿಸುವುದು ಹಾಗೂ ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವೇ ನವರಾತ್ರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂವಾದದಲ್ಲಿ ನೀವೂ ಭಾಗವಹಿಸಬಹುದು. ಇವರೆಲ್ಲರ ಮಾತುಗಳನ್ನು ಕೇಳಬಹುದು, ಇವರೊಂದಿಗೆ ಮಾತನ್ನೂ ಆಡಬಹುದು. ಈ ಸಂವಾದಕ್ಕೆ ಸೇರಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
https://www.clubhouse.com/event/M5jGZ7pq