More

    ರಾಯರಮಠದಲ್ಲಿ ಮಧ್ವನವಮಿ ಆಚರಣೆ

    ವಿಜಯಪುರ : ಇಲ್ಲಿನ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ಮಧ್ವನವಮಿಯನ್ನು ಭಾನುವಾರ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

    ಬೆಳಗ್ಗೆ ಸುಮಧ್ವ ವಿಜಯ ಪಾರಾಯಣ, ವಾಯುಸ್ತುತಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಜರುಗಿದವು.

    ಆನಂತರ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳು ಹಾಗೂ ಆನಂದತೀರ್ಥರ ಭಾವಚಿತ್ರವನ್ನು ರಜತಪೀಠದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಬಳಿಕ ಅವರ ಭಾವಚಿತ್ರ ಮೆರವಣಿಗೆ ಅತ್ಯಂತ ವೈಭವದಿಂದ ಜರುಗಿತು.

    ಮುಖಂಡರಾದ ಪ್ರಕಾಶ ಬಿಜಾಪುರ, ಆರ್.ಆರ್. ಕುಲಕರ್ಣಿ, ಡಾ.ಕೃಷ್ಣಾಚಾರ್ಯ ಕಾಖಂಡಕಿ, ಶ್ರೀಧರಾಚಾರ್ಯರು, ಪವಮಾನ ಜೋಶಿ(ಮುತ್ತಗಿ), ದಾಮೋದರಾಚಾರ್ಯ, ಗೋಪಾಲ ನಾಯಕ, ಕೆ.ಜಿ.ದೇಶಪಾಂಡೆ, ವಿ.ಬಿ.ಕುಲಕರ್ಣಿ, ಜಿ.ಎಸ್. ಕುಲಕರ್ಣಿ, ಕೃಷ್ಣ ಬೀಡಕರ, ಬಂಡಾಚಾರ್ಯ ಜೋಶಿ(ಕೂಡಗಿ), ವಿ.ಡಿ.ಜೋಶಿ, ಜಯತೀರ್ಥ ಕಿರಸೂರ, ವಾಮನರಾವ ಕುಲಕರ್ಣಿ, ವಿ.ಎನ್. ಹುಲ್ಯಾಳಕರ, ಮೋಹನ ಕೌತಾಳ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts