More

    ನಿರಾಶ್ರಿತರಿಗಾಗಿ ಮನೆ ನಿರ್ಮಾಣ

    ವಿಜಯಪುರ: ಸ್ಥಳೀಯ ವಜ್ರ ಹನುಮಾನ ನಗರದಲ್ಲಿ ಲೋಕೋಪಯೋಗಿ ಇಲಾಖೆಯಡಿ 100 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ಚಾಲನೆ ನೀಡಿದರು.
    ನಂತರ ಮಾತನಾಡಿದ ಅವರು, ನಗರದ ತುಂಬ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಕಾಮಗಾರಿಗಳು ಭರದಿಂದ ಸಾಗುತ್ತಿವೆ. ವಿವಿಧ ಯೋಜನೆಗಳಡಿ ಬಡವರಿಗಾಗಿ ಮನೆಗಳನ್ನು ಕಟ್ಟಲಾಗುತ್ತಿದೆ. ಅಲ್ ಅಮೀನ್ ಹಿಂದುಗಡೆ 30 ಎಕರೆ ಜಾಗದಲ್ಲಿ 3500 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಲಾನುಭವಿಗಳು ತಿಂಗಳ ಕಂತು ರೂಪದಲ್ಲಿ ಹಣ ಪಾವತಿಸಿ ಮನೆ ಹೊಂದಬಹುದಾಗಿದೆ ಎಂದರು.
    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮಣ ಜಾಧವ, ವಿಕ್ರಮ್ ಗಾಯಕವಾಡ, ಸರೋಜಿನಿ ಯೇವೂರ, ಪಾಂಡುಸಾಹುಕಾರ ದೊಡ್ಡಮನಿ, ಸಂತೋಷ ಪಾಟೀಲ, ಪ್ರಕಾಶ ಚವಾಣ್, ಪ್ರೇಮಾನಂದ ಬಿರಾದಾರ, ಮಡಿವಾಳ ಯಳವಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts