ಬೆಂಗಳೂರು: ವಿಜಯ್ ರಾವೇಂದ್ರ ಮತ್ತೊಮ್ಮೆ ಪೊಲೀಸ್ ಸಮವಸ್ತ್ರ ತೊಟ್ಟಿದ್ದಾರೆ. ಈ ಹಿಂದೆ ‘ಸೀತಾರಾಮ್ ಬಿನಾಯ್ – ಕೇಸ್ ನಂಬರ್ 18′ ಚಿತ್ರದಲ್ಲಿ ತನಿಖಾಧಿಕಾರಿಯಾಗಿದ್ದ ಅವರು, ಈಗ “ಕೇಸ್ ಆ್ ಕೊಂಡಾಣ’ ಬೆನ್ನತ್ತಿ ಹೊರಟಿದ್ದಾರೆ. “ಸೀತಾರಾಮ್ ಬಿನಾಯ್’ ಚಿತ್ರವನ್ನು ನಿರ್ದೇಶಿಸಿದ್ದ ದೇವಿ ಪ್ರಸಾದ್ ಶೆಟ್ಟಿ ಈ ಚಿತ್ರವನ್ನೂ ನಿರ್ದೇಶಿಸುತ್ತಿರುವುದು ವಿಶೇಷ.
ಇದನ್ನೂ ಓದಿ: ರಣವೀರ್ಗೆ ಕಪಾಳಮೋಕ್ಷ!; ಬೆಂಗಳೂರಿನಲ್ಲಿ ನಡೆದ ಸೈಮಾ ಸಮಾರಂಭದಲ್ಲಿ ಘಟನೆ…
‘ಕೇಸ್ ಆಫ್ ಕೊಂಡಾಣ’ ಚಿತ್ರದ ಮುಹೂರ್ತ ಇತ್ತೀಚೆಗೆ ಆಗಿದೆ. ಈ ಚಿತ್ರದಲ್ಲಿ ವಿಜಯ್ ರಾವೇಂದ್ರಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸುತ್ತಿದ್ದು, ಅವರು ಸಹ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದಿಯಾ’ ಖ್ಯಾತಿಯ ಖುಷಿ ರವಿ ಈ ಚಿತ್ರದಲ್ಲಿ ವೈದ್ಯೆಯಾಗಿ ಅಭಿನಯಿಸುತ್ತಿದ್ದಾರೆ.
ಇಂಥದ್ದೊಂದು ಒಳ್ಳೆಯ ತಂಡ ಸಿಗುವುದೇ ಅಪರೂಪ ಎನ್ನುವ ವಿಜಯ್ ರಾಘವೇಂದ್ರ, ‘ಸೀತಾರಾಮ್ ಬಿನಾಯ್’ ನಂತರ ಅದೇ ನಿರ್ದೇಶಕರ ಜತೆಗೆ ಚಿತ್ರ ಮಾಡುತ್ತಿದ್ದೇನೆ. ದೇವಿ ಅವರ ಶ್ರದ್ಧೆ, ಕೆಲಸದ ಬಗ್ಗೆ ಇರುವ ಪ್ರೀತಿ ನನಗೆ ಬಹಳ ಇಷ್ಟ. ಈ ತರಹದ ತಂತ್ರಜ್ಞರು ಬಹಳ ಅಪರೂಪ’ ಎಂದರು.
ಇದನ್ನೂ ಓದಿ: 17ರಂದು ಕಬ್ಜ ಟೀಸರ್; ಉಪೇಂದ್ರ ಹುಟ್ಟುಹಬ್ಬಕ್ಕೆ ಚಂದ್ರ ಉಡುಗೊರೆ
ಈ ಚಿತ್ರವನ್ನು ದೇವಿಪ್ರಸಾದ್ ಶೆಟ್ಟಿ, ಸಾತ್ವಿಕ್ ಹೆಬ್ಬಾರ್ ಮತ್ತು ಅರವಿಂದ್ ಶೆಟ್ಟಿ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಹಿರಿಯ ಪತ್ರಕರ್ತ ಜೋಗಿ ಅವರ ಸಂಭಾಷಣೆ, ವಿಶ್ವಜಿತ್ ರಾವ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿರುವ ಈ ಚಿತ್ರದ ಚಿತ್ರೀಕರಣ ಸೆ. 28ರಿಂದ ಪ್ರಾರಂಭವಾಗಲಿದೆ.
ವಿಷ್ಣುವರ್ಧನ್ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್ ಜಾತ್ರೆ..