More

    ಪತ್ನಿ ಸ್ಪಂದನಾ ಒಡವೆ, ಬಟ್ಟೆಗಳನ್ನು ಬೇರೆಯವರಿಗೆ ಕೊಟ್ಟುಬಿಟ್ರಾ? ವಿಜಯ್​ ರಾಘವೇಂದ್ರ ಭಾವುಕ ಮಾತು

    ಬೆಂಗಳೂರು: ಕುಟುಂಬದಲ್ಲಿ ಯಾರೇ ಸತ್ತರೂ ಅವರಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದೆಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಈಗಲೂ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇನ್ನೂ ಕೆಲವರು ನೆನಪುಗಳಿಗಾಗಿ ತಮ್ಮ ಪ್ರೀತಿ ಪಾತ್ರರ ಅನುಪಸ್ಥಿತಿಯಲ್ಲಿ ಅವರಿಗೆ ಇಷ್ಟವಾದ ವಸ್ತುಗಳನ್ನು ಜತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಈ ವಿಚಾರದಲ್ಲಿ ನಟ ವಿಜಯರಾಘವೇಂದ್ರ ಅವರ ನಿಲುವು ಏನಿದೆ ಎಂಬ ಕುತೂಹಲು ಎಲ್ಲರಲ್ಲೂ ಇದ್ದೇ ಇದೆ. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ.

    ಆಗಸ್ಟ್​ 6ರಂದು ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಬ್ಯಾಂಕಾಕ್​ನಲ್ಲಿರುವಾಗಲೇ ಮೃತಪಟ್ಟ ಸುದ್ದಿ ಎಲ್ಲರಿಗೂ ತಿಳಿದಿದೆ. ಇಡೀ ಚಿತ್ರರಂಗಕ್ಕೆ ಆಘಾತ ನೀಡಿದ ಸುದ್ದಿ ಇದು. ಚಿಕ್ಕ ವಯಸ್ಸಿನಲ್ಲೇ ಸ್ಪಂದನಾ ಬಾರದ ಲೋಕಕ್ಕೆ ಪಯಣಿಸಿದ್ದು ಬಹಳ ದುಃಖದ ಸಂಗತಿ. ಅದರಲ್ಲೂ ಪ್ರೀತಿಸಿ ವಿವಾಹವಾಗಿದ್ದ ವಿಜಯ್​ ರಾಘವೇಂದ್ರರಿಗೆ ಸ್ಪಂದನಾ ಸರ್ವಸ್ವವೂ ಆಗಿದ್ದರು. ವಿಜಯ್​ ಅವರ ಏಳುಬೀಳಿನಲ್ಲಿ ಸದಾ ಬೆಂಗಾವಲಾಗಿ ನಿಲ್ಲುತ್ತಿದ್ದ ಸ್ಪಂದನಾ ಇನ್ನಿಲ್ಲ ಎಂಬುದನ್ನು ವಿಜಯ್​ಗೆ ಈಗಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೂ ವಾಸ್ತವ ಮರೆಮಾಚಲು ಸಾಧ್ಯವಿಲ್ಲ. ಸ್ಪಂದನಾ ದೈಹಿಕವಾಗಿ ಇಂದು ಇಲ್ಲ. ಆದರೆ, ಅವರು ಸಾಕಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಅವರ ಉಡುಗೆ ಮತ್ತು ಆಭರಣಗಳು ಕೂಡ ಒಂದು.

    ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಮೃತಪಟ್ಟವರಿಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಇಟ್ಟುಕೊಳ್ಳುವುದಿಲ್ಲ. ಅದರಲ್ಲೂ ಬಟ್ಟೆಗಳನ್ನಂತೂ ಇಡುವುದೇ ಇಲ್ಲ. ಹೀಗಿರುವಾಗ ಸ್ಪಂದನಾ ಬಟ್ಟೆಗಳು ಮತ್ತು ಒಡವೆಗಳನ್ನು ಏನು ಮಾಡಿದಿರಿ ಎಂದು ಖಾಸಗಿ ಚಾನೆಲ್​ ಒಂದರಲ್ಲಿ ಪ್ರಶ್ನೆ ಮಾಡಿದಾಗ ವಿಜಯ್​ ತುಂಬಾ ಭಾವುಕರಾಗಿಯೇ ಮಾತನಾಡಿದ್ದಾರೆ. ವಿಜಯ್​ ಆಡಿರುವ ಮಾತುಗಳನ್ನು ಕೇಳಿದರೆ ಸ್ಪಂದನಾ ಸಾವಿನ ನೋವಿನಿಂದ ವಿಜಯ್​ ಇನ್ನೂ ಹೊರಬಂದಿಲ್ಲ ಎಂಬಂತೆ ಕಾಣುತ್ತದೆ.

    ವಿಜಯ್​ ಹೇಳಿದ್ದೇನು ಎಂದು ನೋಡುವುದಾದರೆ, ಸ್ಪಂದನಾ ಇಂದು ದೈಹಿಕವಾಗಿ ನಮ್ಮ ನಡುವೆ ಇರದಿರಬಹುದು. ಆದರೆ, ನನ್ನೊಂದಿಗೆ ಹಾಗೂ ನನ್ನ ಪುತ್ರ ಶೌರ್ಯನ ಜತೆ ಸದಾ ಇದ್ದೇ ಇರುತ್ತಾಳೆ. ಸ್ಪಂದನಾ ಸಾವಿಗೀಡಾದ 6ನೇ ತಾರೀಖು ಪ್ರತಿ ತಿಂಗಳು ಬಂದಾಗ ತುಂಬಾ ನೋವಾಗುತ್ತದೆ. ಅದು ಸಹಜವೂ ಹೌದು, ಆದರೆ, ಇನ್ನುಳಿದ ದಿನ ಕೆಲಸ, ಫ್ರೆಂಡ್ಸ್​ ಅಂತಾ ಬಿಜಿಯಾಗಿರುವುದರಿಂದ ನೋವು ಕಾಡುವುದಿಲ್ಲ. ಆದರೆ, 6ನೇ ತಾರೀಖು ಅಂದರೆ ಸಾಕು ಮನಸ್ಸಿನಲ್ಲಿ ನೋವು ತುಂಬಿಕೊಳ್ಳುತ್ತದೆ. ನನ್ನ ಜೀವನದಲ್ಲಿ ನಾನು ತುಂಬಾ ಇಷ್ಟಪಟ್ಟ ಮತ್ತು ತುಂಬಾ ಗೌರವದಿಂದ ಕಂಡಂತಹ ವ್ಯಕ್ತಿ ಅವಳು. ಅವಳಿಲ್ಲದ ದಿನಗಳು ನಿಜಕ್ಕೂ ಬೇಸರವಾಗುತ್ತಿದೆ ಎನ್ನುತ್ತಲೇ ವಿಜಯ್​ ಭಾವುಕರಾದರು.

    ಸ್ಪಂದನಾಗೆ ಸಂಬಂಧಿಸಿದ ಯಾವೊಂದು ವಸ್ತುಗಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಬಟ್ಟೆ, ಆಭರಣಗಳು ಸೇರಿದಂತೆ ಆಕೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದೇನೆ. ಅವುಗಳನ್ನು ನೋಡಿದಾಗಲೆಲ್ಲ ಸ್ಪಂದನಾಳ ನೆನಪಾಗುತ್ತದೆ. ಅಲ್ಲದೆ, ಆಕೆ ನಮ್ಮ ಜತೆಯಲ್ಲಿಯೇ ಇದ್ದಾಳೆ ಎನಿಸುತ್ತದೆ ಎಂದು ವಿಜಯ್​ ಹೇಳಿದರು. ಅಲ್ಲದೆ, ಸದ್ಯ ಮನೆಯಲ್ಲಿ ವಿಜಯ್​ ರಾಘವೇಂದ್ರ ಮತ್ತು ಅವರ ಪುತ್ರ ಶೌರ್ಯ ಮಾತ್ರ ಉಳಿದುಕೊಂಡಿದ್ದು, ಅವರಿಗೆ ಅಡುಗೆ ಮಾಡಲು ಅವರ ಅಕ್ಕ ಮತ್ತು ಸಹೋದರ ಮುರಳಿ ಅವರ ಪತ್ನಿ ಬರುತ್ತಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

    ”ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ”- ಸ್ಪಂದನಾ ಬಗ್ಗೆ ಭಾವುಕ ಸಾಲುಗಳನ್ನು ಹೇಳಿದ ವಿಜಯ್ ರಾಘವೇಂದ್ರ

    ತಮ್ಮನ ಹೆಂಡತಿಯನ್ನು ಭೀಕರವಾಗಿ ಕೊಂದ ಕಿರಾತಕ! ಕೊಲೆ ಹಿಂದಿನ ಕಾರಣ ಕೇಳಿ ಸಂಬಂಧಿಕರು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts