More

    ಮಸೀದಿಯಲ್ಲಿ ಹೋಮ ಮಾಡುತ್ತೇವೆ! ವಿವಾದಾತ್ಮಕ ಹೇಳಿಕೆ ಹಿಂಪಡೆದ ವಿಎಚ್​ಪಿ ನಾಯಕಿ

    ಲಖನೌ: ಮುಸ್ಲಿಂ ಧರ್ಮದವರು ಹಿಂದೂ ದೇವಾಲಯದಲ್ಲಿ ನಮಾಜ್​ ಮಾಡಿ, ಪೊಲೀಸ್​ ಪ್ರಕರಣ ದಾಖಲಾದ ಬೆನ್ನಲ್ಲೇ, ಮಸೀದಿಗಳಲ್ಲಿ ಹೋಮ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್​ನ ನಾಯಕಿಯೊಬ್ಬರು ಹೇಳಿದ್ದಾರೆ. ನಾಯಕಿಯ ಈ ಹೇಳಿಕೆ ಭಾರಿ ಪ್ರಮಾಣದ ವಿವಾದಕ್ಕೆ ಕಾರಣವಾದ ನಂತರ ಅವರು ಹೇಳಿಕೆ ಹಿಂಪಡೆದಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಅಪ್ಪ ಮಗನ ಕೃಷಿ ಪ್ರೀತಿ; ಸೈಫ್​ ಜತೆ ಜಮೀನಿನಲ್ಲಿ ನೀರು ಹಾಯಿಸ್ತಿದ್ದಾನೆ ತೈಮೂರ್​

    “ಮುಸಲ್ಮಾನರು ಸಾಮಾಜಿಕ ಸಮನ್ವಯದ ಹೆಸರಿನಲ್ಲಿ ಹಿಂದೂ ದೇವಾಲಯಗಳಿಗೆ ಬಂದು ನಮಾಜ್​ ಮಾಡುತ್ತಾರೆ. ನಾವು ಹಿಂದೂಗಳೂ ಕೂಡ ಅದೇ ರೀತಿಯಲ್ಲಿ ಮಸೀದಿಗಳಿಗೆ ತೆರಳಿ ಹೋಮ ಹವನ ಮಾಡಬೇಕು. ನಾನು ಲಖನೌನ ಪುರಾತನ ಮಸೀದಿಯಲ್ಲಿ ಹೋಮ ಮಾಡುತ್ತೇನೆ” ಎಂದು ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ಶುಕ್ರವಾರ ಹೇಳಿದ್ದಾರೆ. ತಮ್ಮ ಜತೆಗೆ ಹೋಮ ನಡೆಸಲು ಬಿಜೆಪಿ ಮತ್ತು ಬೇರೆ ಸಂಘಟನೆಗಳ ನಾಯಕರಿಗೂ ಕರೆ ನೀಡಿದ್ದಾರೆ. ಲವ್​ ಜಿಹಾದ್​ ಮೂಲಕ ಹಿಂದೂ ಯುವತಿರನ್ನು ಬಲಿ ತೆಗೆದುಕೊಳ್ಳುವ ಮುಸ್ಲಿಂ ಯುವಕರನ್ನು ನೇರವಾಗಿ ನೇಣಿಗೆ ಏರಿಸಬೇಕೆಂದೂ ಅವರು ಹೇಳಿದ್ದಾರೆ.

    ಪ್ರಾಚಿಯವರು ಈ ರೀತಿ ಹೇಳಿರುವುದಕ್ಕೆ ಅನೇಕರು ಆಕ್ರೋಶ ವ್ಯಕಪಡಿಸಿದ್ದರು. ಅದರ ಬೆನ್ನಲ್ಲೇ ಪ್ರಾಚಿ ಅವರು ಹೇಳಿಕೆಯನ್ನು ವಾಪಾಸು ಪಡೆದಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಲವ್ ಜಿಹಾದ್ ತಡೆಗೆ ಸರ್ಕಾರದ ಕ್ರಮ ಸ್ವಾಗತಾರ್ಹ

    ಈ ತಿಂಗಳ ಆರಂಭದಲ್ಲಿ ಮಥುರಾದ ನಂದಗಾಂವ್​ನ ನಂದ್​ ಬಾಬಾ ಮಂದಿರದಲ್ಲಿ ಇಬ್ಬರು ಮುಸ್ಲಿಂ ಯುವಕರು ನಮಾಜ್​ ಮಾಡಿದ್ದರು. ಆ ಸಂಬಂಧ ಫೈಜಲ್​ ಖಾನ್​, ಚಂದ್​ ಮೊಹಮ್ಮದ್​ ವಿರುದ್ಧ ಮಥುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಗೆ ಸಹಕಾರ ನೀಡಿದ ಅಲೋಕ್​ ರತನ್​ ಮತ್ತು ನೀಲೇಶ್​ ಗುಪ್ತಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಘಟನೆಯ ಬೆನ್ನಲ್ಲೇ ಹಿಂದೂ ಯುವಕರು, ಮಸೀದಿಯಲ್ಲಿ ಹನುಮಾನ್​ ಚಾಲಿಸಾ ಪಠಿಸಿದ್ದು, ಮೂವರು ಯುವಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)

    ಬಾತ್​ರೂಂನಲ್ಲಿ ಪತ್ನಿಯ ನಗ್ನ ಚಿತ್ರ ತೆಗೆದು, ಆಕೆಗೇ ಬ್ಲಾಕ್​ಮೇಲ್​ ಮಾಡಿದ ಗಂಡ!

    ಲಾಕ್​ಡೌನ್​ ನಂತರ ಮೊದಲನೇ ಉಪಗ್ರಹ ಉಡಾವಣೆ ಮಾಡಿದ ಇಸ್ರೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts