ಲಖನೌ: ಉತ್ತರ ಪ್ರದೇಶ ಸರ್ಕಾರ ಮಸೀದಿಗಾಗಿ ಐದು ಸ್ಥಳಗಳನ್ನು ಗುರುತಿಸಿದೆ.
ಮಿರ್ಜಾಪುರ, ಶಂಶುದ್ದೀನ್ಪುರ ಮತ್ತು ಚಾಂದ್ಪುರ ಎಂಬಲ್ಲಿ ಸ್ಥಳಗಳನ್ನು ಗರುತಿಸಲಾಗಿದೆ. ಈ ಜಾಗ ಪಂಚಕೋಸಿ ಪರಿಕ್ರಮ ಎಂದು ಗುರುತಿಸಲ್ಪಡುವ ಸ್ಥಳದಿಂದ 15 ಕಿಲೋಮೀಟರ್ ದೂರದಲ್ಲಿ ಇದೆ. ಈ ಮೂರು ಸ್ಥಳಗಳಲ್ಲಿ ಒಟ್ಟು 5 ಸ್ಥಳಗಳನ್ನು ಗುರುತಿಸಿದೆ.
ವಿವಾದಿತ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಸುಪ್ರೀಂ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಸೀದಿಗೆ ಜಾಗ ಗುರುತಿಸಲಾಗಿದೆ.
ಉತ್ತರ ಪ್ರದೇಶದ ಸರ್ಕಾರ ಈ ಸ್ಥಳಗಳಲ್ಲಿ ಗುರುತಿಸಿರುವ ಜಾಗವನ್ನು ಮಸೀದಿ ಕಟ್ಟಿಸಲು ಸುನ್ನಿ ವಕ್ಫ್ ಬೋರ್ಡ್ಗೆ ನೀಡಲಾಗುವುದು.
ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ವಕ್ಫ್ಬೋರ್ಡ್ನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುವುದು. (ಏಜೆನ್ಸೀಸ್)