ಗದಗ: ನಗರದ ವಾರ್ಡ ನಂ.15 ರ ಬಸವೇಶ್ವರ ನಗರದ ವೀರಾಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಹೈಮಾಸ್ಕ್ ಕಾಮಗಾರಿಗೆ ಶುಕ್ರವಾರ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಸದಸ್ಯ ಚಂದ್ರಶೇಖರ ತಡಸದ, ಮಾನ್ವಿ, ಚಮನ್ ರಾಜಪುರೋಹಿತ್, ಅಶೋಕ ಕುಡತಿನಿ, ಹಿರಿಯರಾದ ಶಿವಬಸಪ್ಪ ಯಂಡಿಗೇರಿ, ಬಸವರಾಜ ಖಾನಾಪೂರ, ನಾಗಪ್ಪ ಶಿರೂರ, ಸಂತೋಷ ದೋಟ್ಯಾಳ ಇತರರು ಇದ್ದರು.