ಉಡುಪಿ: ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, ಆಕೆ ಸಾಯುವ ಮುನ್ನವೇ ಆತ ನಾಪತ್ತೆಯಾದ ಅನುಮಾನಾಸ್ಪದ ಘಟನೆ ಉಡುಪಿಯಲ್ಲಿ ನಡೆದಿದ್ದು, ಪ್ರಕರಣದ ಮತ್ತಷ್ಟು ಮಾಹಿತಿಗಳು ಇದೀಗ ಹೊರಬರುತ್ತಿದೆ.
ಶನಿವಾರ (ಅ.24) ಸಂಜೆ ಸುಮಾರು ಆರು ಮೂವತ್ತರ ಹೊತ್ತಿಗೆ ಉಡುಪಿಯ ಗಾಂಧಿ ಆಸ್ಪತ್ರೆ ಆವರಣಕ್ಕೆ ರಿಕ್ಷಾವೊಂದು ಬಂದುನಿಂತಿತು. ರಿಕ್ಷಾದಿಂದ ಇಳಿದ ಯುವಕನೊಬ್ಬ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಆಸ್ಪತ್ರೆಯ ಸ್ಟ್ರೆಚ್ಚರ್ಗೆ ಹಾಕಿದ್ದ. ಹುಡುಗಿ ತಲೆತಿರುಗಿ ಬಿದ್ದಿದ್ದಳು. ಇವಳಿಗೆ ಚಿಕಿತ್ಸೆ ನೀಡಿ ಎಂದು ಹೇಳಿದವನೇ ಅಲ್ಲಿಂದ ಕಾಲ್ಕಿತ್ತಿದ್ದ. ಇತ್ತ ಆಸ್ಪತ್ರೆಗೆ ದಾಖಲಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಯುವತಿ ಕೊನೆಯುಸಿರೆಳೆದಿದ್ದಾಳೆ.
ಇದನ್ನೂ ಓದಿ: ತಿಥಿ ಕಾರ್ಯ ಮುಗಿಸಿ ರಾತ್ರಿ ಸವಿನಿದ್ದೆಗೆ ಜಾರಿದ್ದ ಐವರು ಮಹಿಳೆಯರು ಬೆಳ್ಳಂಬೆಳಗ್ಗೆ ದಾರುಣ ಸಾವು!
ಮೊಬೈಲ್ ಸ್ವಿಚ್ ಆಫ್
ಮೃತ ಯುವತಿಯನ್ನು ರಕ್ಷಿತಾ ನಾಯಕ್ ಎಂದು ಗುರುತಿಸಲಾಗಿದ್ದು, ಕೆಲವೇ ಸಮಯದಲ್ಲಿ ಯುವತಿಯ ಮನೆಯವರು ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಯುವತಿ ಮನೆಯವರೆಗೆ ಯುವಕನೇ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಕುಟುಂಬವನ್ನೇ ದಿಗ್ಭ್ರಮೆಗೊಳಿಸಿದ ಘಟನೆ
ಉಡುಪಿಯ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬ ಗ್ರಾಮದ ನಿವಾಸಿಯಾಗಿರುವ ರಕ್ಷಿತಾ, ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಳು. ಕರೊನಾ ಸಮಯದಲ್ಲಿ ಮಂಗಳೂರಿನ ಹೋಟೆಲ್ ಒಂದರಲ್ಲಿ ನನಗೆ ಉದ್ಯೋಗ ಸಿಕ್ಕಿದೆ ಎಂದು ಮನೆಯವರಿಗೆ ತಿಳಿಸಿದ್ದ ರಕ್ಷಿತಾ, ಉಡುಪಿಯ ಅಂಬಾಗಿಲು ಪರಿಸರದಲ್ಲಿ ಸ್ನೇಹಿತೆಯ ಜತೆಗೆ ವಾಸವಿರುತ್ತೇನೆ ಎಂದು ಪಾಲಕರಿಗೆ ಹೇಳಿದ್ದಳು. ಹದಿನೈದು ದಿನಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ರಕ್ಷಿತಾ ಬಗ್ಗೆ ಹೆತ್ತವರು ಕೂಡ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನಿನ್ನೆ ನಡೆದಿರುವ ಘಟನೆ ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ
ಇದನ್ನೂ ಓದಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸೀರಿಯಲ್ ನಟಿ..!
ಯುವಕನ ಗುರುತು ಪತ್ತೆ
ರಕ್ಷಿತಾಳನ್ನು ಆಸ್ಪತ್ರೆಗೆ ಬಿಟ್ಟು ಹೋದವನ ವಿವರವನ್ನು ಪೊಲೀಸರು ಕಲೆ ಹಾಕಿದ್ದು, ಈತನನ್ನು ಕೊಲ್ಲೂರು ಸಮೀಪದ ಜಡ್ಕಲ್ ನಿವಾಸಿ ಪ್ರಶಾಂತ್ ಕುಂದರ್ಯೆಂದು ಗುರುತಿಸಲಾಗಿದೆ. ವಿವಾಹಿತನಾಗಿರುವ ಈತ ರಕ್ಷಿತಾಳನ್ನು ಎಲ್ಲಿಂದ ಕರೆದು ತಂದಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರಕ್ಷಿತಾಳ ಮೃತದೇಹದ ಕತ್ತಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಮಾಹಿತಿ ತಿಳಿಯಬೇಕಾಗಿದೆ. ಇನ್ನು ಮೃತದೇಹವನ್ನು ಪರಿಶೀಲಿಸಿರುವ ವೈದ್ಯರು ಶರೀರದಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವ ಬಗ್ಗೆ ವರದಿ ನೀಡಿದ್ದಾರೆ.
ಜಾಲತಾಣದಲ್ಲಿ ಫುಲ್ ಆಕ್ಟಿವ್
ಸಣ್ಣಪ್ರಾಯದಲ್ಲೇ ಸಾಕಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ರಕ್ಷಿತಾ, ಮಾಡಲಿಂಗ್ ಕ್ಷೇತ್ರದಲ್ಲಿ ಮುಂದುವರೆಯುವ ಬಗ್ಗೆ ಕನಸು ಕಟ್ಟಿಕೊಂಡಿದ್ದಳು. ಇನ್ಸ್ಟಾಗ್ರಾಮ್ ನಲ್ಲಿ 44,000 ಫಾಲವರ್ಸ್ಗಳನ್ನು ಹೊಂದಿದ್ದ ಈಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಆಕ್ಟಿವ್ ಆಗಿದ್ದಳು. ಪೋಷಕರಿಂದ ದೂರ ಉಳಿದಿದ್ದೇ ಈ ದುರಂತಕ್ಕೆ ಕಾರಣ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ಇದನ್ನೂ ಓದಿ: ಪಕ್ಕದ್ಮನೆ ಹುಡುಗಿಯನ್ನು ಟೆರೇಸ್ನಿಂದ ತಳ್ಳಿದ್ರು; ಯುವತಿಗೆ ಗಂಭೀರ ಗಾಯ, ಮೂವರ ಬಂಧನ…
ರಕ್ಷಿತಾ ಪೋಷಕರು ನಗರ ಠಾಣೆಯಲ್ಲಿ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದು, ಉಡುಪಿ ನಗರ ಠಾಣಾ ಪೊಲೀಸರು ಈ ನಿಗೂಢ ಸಾವಿನ ಬಗ್ಗೆ ತೀವ್ರವಾದ ತನಿಖೆ ನಡೆಸುತ್ತಿದ್ದಾರೆ.
ನೇಣು ಹಾಕಿಕೊಂಡಿರುವ ಶಂಕೆ
ಇನ್ನು ರಕ್ಷಿತಾ, ಪಂಚೆಯಿಂದ ನೇಣು ಹಾಕಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ಒಂದು ವರ್ಷದಿಂದ ವಿವಾಹಿತ ಪ್ರಶಾಂತ್ ಕುಂದರ್ ಜತೆ ಲಿವಿಂಗ್ ಇನ್ ರಿಲೇಶನ್ನಲ್ಲಿದ್ದಳು ಎನ್ನಲಾಗಿದೆ.
ನಾನು ವಿಪರೀತ ಕುಡಿದಿದ್ದೇನೆ
ಪೊಲೀಸರ ಕೈಸೇರಿರುವ ಪ್ರಶಾಂತ್ ಹಾಗೂ ರಕ್ಷಿತಾಳ ಕಾಲ್ ರೆಕಾರ್ಡ್ನಿಂದ ಸ್ಪೋಟಕ ವಿಚಾರ ಬಯಲಾಗಿದ್ದು, ನಾನು ವಿಪರೀತ ಕುಡಿದಿದ್ದೇನೆ. ಸಾಯುತ್ತೇನೆಂದು ಪ್ರಶಾಂತ್ಗೆ ರಕ್ಷಿತಾ ಕರೆ ಮಾಡಿದ್ದಳು. ಇದನ್ನು ತಿಳಿದ ಪ್ರಶಾಂತ್, ತಕ್ಷಣ ಮನೆಗೆ ಬಂದು ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಆಕೆ ಮೃತಳಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮೊದಲ ವಿವಾಹ ವಾರ್ಷಿಕೋತ್ಸವ ದಿನದಂದೇ ವಿವಾಹಿತೆ ನೇಣಿಗೆ ಶರಣು..!
ಮೊದಲೇ ಲವ್ ಮ್ಯಾರೆಜ್ ಆಗಿದ್ದ ಪ್ರಶಾಂತ್
ಸದ್ಯ ಪ್ರಶಾಂತ್ ಪತ್ತೆಗೆ ಉಡುಪಿ ನಗರ ಪೊಲೀಸರು ಬಲೆ ಬೀಸಿದ್ದಾರೆ. ಪ್ರಶಾಂತ್ ನಗರದ ಫರ್ನಿಚರ್ ವರ್ಲ್ಡ್ನಲ್ಲಿ ಕೆಲಸದಲ್ಲಿದ್ದ. ಇಂಟೀರಿಯರ್ ಡಿಸೈನ್ ಹಾಗೂ ಫರ್ನಿಚರ್ ಸೇಲ್ಸ್ ಮಾಡುತ್ತಿದ್ದ. ಈಗಾಗಲೇ ಲವ್ ಮ್ಯಾರೆಜ್ ಆಗಿ ಉಡುಪಿಯ ಉಪ್ಪೂರಿನಲ್ಲಿ ಪತ್ನಿ ಜತೆಗೆ ವಾಸವಾಗಿದ್ದ. ಇತ್ತ ರಕ್ಷಿತಾ, ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬೆಳಿಗ್ಗೆ ರಕ್ಷಿತಾ ಮನೆಗೆ ಪ್ರಶಾಂತ್ ಬಂದು ಹೋಗುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೂ ಸಾವಿನ ನಿಖರ ಕಾರಣಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)