More

    ಮಾರ್ಷಲ್ ಮೇಲೆ ಹಲ್ಲೆ ನಡೆಸಿದವರ ಸೆರೆ

    ಬೆಂಗಳೂರು : ಕರೊನಾ ಸೋಂಕು ತಡೆಗೆ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ತೋರಿದ ಯುವಕರಿಗೆ ದಂಡ ವಿಧಿಸಲು ಮುಂದಾದ ಮಾರ್ಷಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಯುವಕರನ್ನು ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.

    ಮುಳಬಾಗಿಲು ಸಮೀಪದ ಕೋಲದೇವಿ ಗ್ರಾಮದ ಅರುಣ್ (26) ಮತ್ತು ಜಗದೀಶ್ (28) ಬಂಧಿತರು. ಕೋವಿಡ್-19 ಸೋಂಕು ತಡೆಯುವ ಸಲುವಾಗಿ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಇಲ್ಲವಾದರೆ, ನಗರ ಪ್ರದೇಶದಲ್ಲಿ 1 ಸಾವಿರ ಮತ್ತು ಗ್ರಾಮೀಣಾ ಭಾಗದಲ್ಲಿ 500 ರೂ. ದಂಡ ವಿಧಿಸಲು ಸೂಚನೆ ನೀಡಿದೆ. ಈ ಮೇರೆಗೆ ಬಿಬಿಎಂಪಿ ಮಾರ್ಷಲ್‌ಗಳು ಕೆ.ಆರ್.ಪುರದಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿದ್ದ ಅರುಣ್ ಮತ್ತು ಜಗದೀಶ್‌ನನ್ನು ತಡೆದು ದಂಡ ವಸೂಲಿಗೆ ಮುಂದಾಗಿದ್ದಾರೆ.

    ದಂಡ ಪಾವತಿಗೆ ನಿರಾಕರಿಸಿದ ಆರೋಪಿಗಳು, ಮಾರ್ಷೆಲ್‌ಗಳ ಜತೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮಾರ್ಷೆಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೆ.ಆರ್.ಪುರ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts